ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

೨೦೧೬ ಸಾಲಿನ ಭಗೀರಥ್ ಪ್ರಯಾಸ್ ಸಮ್ಮಾನ್ (ಬಿಪಿಎಸ್) ಪ್ರಶಸ್ತಿ

ಇಂಡಿಯಾ ರಿವರ್ ವಾಟರ್ಸ್ (ಐ.ಆರ್.ಡಬ್ಲ್ಯು/IRW) ಆಯೋಜನಾ ಸಮಿತಿಯು, ನದಿ ಸಂರಕ್ಷಣೆಯನ್ನು ಕುರಿತಾಗಿ ದೇಶದಲ್ಲಿ ಕೈಗೊಳ್ಳಲಾದ ಅಭೂತಪೂರ್ವವಾದ, ಇನ್ನೂ ಬೆಳಕಿಗೆ ಬರದ ಯತ್ನಗಳನ್ನು ಗುರುತಿಸುವ ಸಲುವಾಗಿ, ಇನ್ಟಾಕ್ (INTACH), ಪೀಸ್ ಇನ್ಸ್ಟಿಟ್ಯೂಟ್ ಚ್ಯಾರಿಟೆಬಲ್ ಟ್ರಸ್ಟ್ (PEACE Institute Charitable Trust), ಟಾಕ್ಸಿಕ್ಸ್ ಲಿಂಕ್ (Toxics Link), ಎಸ್.ಎ.ಎನ್.ಡಿ.ಆರ್.ಪಿ (SANDRP) ಹಾಗೂ ಡಬ್ಲ್ಯು.ಡಬ್ಲ್ಯು.ಎಫ್ ಇಂಡಿಯಾದೊಂದಿಗೆ (WWF-India) ಜಂಟಿಯಾಗಿ ಭಗೀರಥ್ ಪ್ರಯಾಸ್ ಸಮ್ಮಾನ್ (ಬಿಪಿಎಸ್) ಪ್ರಶಸ್ತಿಯನ್ನು ೨೦೧೪ರಿಂದ ನೀಡುತ್ತ ಬಂದಿದೆ.  ಈ ವರ್ಷ ಆಯೋಜನಾ ಸಮಿತಿಯು ಇಂಡಿಯಾ ರಿವರ್ಸ್ ವೀಕ್ ಅನ್ನು ನವೆಂಬರ್ ೨೮-೩೦ರಂದು ನವದೆಹಲಿಯಲ್ಲಿ ನಡೆಸುವ ಯೋಜನೆಯನ್ನು ಹೊಂದಿದೆ

ಅದರ ಅಂಗವಾಗಿ, ಈ ವರ್ಷದ, ಅಂದರೆ ೨೦೧೬ರ ಪ್ರಶಸ್ತಿಗಾಗಿ ನಾಮ ನಿರ್ದೇಶನಗಳನ್ನು ಕಳುಹಿಸಲು ಕೊನೆಯ ದಿನಾಂಕ ಜುಲೈ ೧೫, ೨೦೧೬. ಅದನ್ನು ಕಳುಹಿಸಬೇಕಾದ ಈಮೇಲ್ ವಿಳಾಸ: suresh@wwfindia.net ಹಾಗೂ ಇದರ ಪ್ರತಿಯನ್ನು indiariversweek2014@gmail.com ಈ ಈಮೇಲ್ ವಿಳಾಸಕ್ಕೂ ಕಳುಹಿಸಬೇಕು.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*