[ಎಲ್ಲಿ ಹೋಗುವಿರಿ, ನಿಲ್ಲಿ ಮೋಡಗಳೇ (ಭಾಗ-೨)]
ಕರ್ನಾಟಕದಲ್ಲೂ ಶೋಚನೀಯ ಸ್ಥಿತಿ
ವಿಳಂಬವಾದರೂ ಮುಂಗಾರು ಮಳೆ ಬೀಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಕಾಯುತ್ತಿದೆ. ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತಳಮಟ್ಟಕ್ಕೆ ಹೋಗಿದ್ದು, ಇದರಿಂದ ಕೃಷಿ ಮತ್ತು ವಿದ್ಯುತ್ ಕ್ಷೇತ್ರಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮವಾಗಿದೆ.
ಮಳೆಯ ಕೊರತೆಯಿಂದ ತತ್ತರಿಸುತ್ತಿರುವ ಕರ್ನಾಟಕದ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಈ ಸಲ ಹೆಚ್ಚೂಕಡಿಮೆ ಶೂನ್ಯದ ಮಟ್ಟಕ್ಕೆ ಹೋಗಿದೆ! ಕೇಂದ್ರ ಸರ್ಕಾರದ ಜೂನ್ ೨೫ರವರೆಗಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ, ದೇಶದ ೮೧ ಜಲಾಶಯಗಳ ಸ್ಥಿತಿ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದರಲ್ಲಿ ಕರ್ನಾಟಕದ ಕೃಷ್ಣರಾಜಸಾಗರ, ಕಬಿನಿ, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಮೊದಲಾದ ಅಣೆಕಟ್ಟೆಗಳು ಸೇರಿವೆ.
ಅದರಲ್ಲಂತೂ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ನೀರಿನ ಸಂಗ್ರಹ ಹೆಚ್ಚೂ ಕಡಿಮೆ ಶೂನ್ಯದ ಸ್ಥಿತಿಗೆ ತಲುಪಿದೆ. ಶೇ.೦ ನೀರು ಸಂಗ್ರಹವಿದೆ ಎಂದರೆ, ಅಣೆಕಟ್ಟೆ ಖಾಲಿಯಾದ ಹಾಗೆ. ನೀರಿನ ಸಂಗ್ರಹ ಶೇಕಡಾ ೬೦ಕ್ಕಿಂತ ಕಡಿಮೆಯಾದರೆ, ಹೊರಹರಿವು ನಿಂತಿದೆ ಎಂದೇ ಅರ್ಥ. ಪರಿಸ್ಥಿತಿ ಹೀಗೇ ಮುಂದುವರಿದರೆ ಕುಡಿವ ನೀರಿನ ಪೂರೈಕೆ ಅಸ್ತವ್ಯಸ್ತವಾಗುತ್ತದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಕೇವಲ ಶೇ.೬ ಮತ್ತು ಲಿಂಗನಮಕ್ಕಿಯಲ್ಲಿ ಕೇವಲ ಶೇ.೮ ನೀರಿದೆ.
ಕುಡಿವ ನೀರು ಮತ್ತು ಕೃಷಿಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ ೧.೧೬೩ ಶತಕೋಟಿ ಕ್ಯುಬಿಕ್ ಮೀಟರ್. ಆದರೆ, ಈಗ ಈ ಅಣೆಕಟ್ಟೆ ಹೆಚ್ಚೂಕಮ್ಮಿ ಬರಿದಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ ಒಟ್ಟು ಸಾಮರ್ಥ್ಯದ ಶೇ.೪೧ರಷ್ಟು ನೀರಿನ ಸಂಗ್ರಹವಿತ್ತು. ಕಬಿನಿ ಡ್ಯಾಂ ೦.೨೭೫ ಶತಕೋಟಿ ಕ್ಯುಬಿಕ್ ಮೀಟರ್ ಸಾಮರ್ಥ್ಯ ಪಡೆದಿದೆ. ಆದರೆ ಸದ್ಯ ಇದರ ನೀರಿನ ಸಂಗ್ರಹವೂ ಶೂನ್ಯಕ್ಕೆ ಕುಸಿದಿದೆ. read more »
Bookmark/Search this post with: