ಹೇರೋಹಳ್ಳಿ ಕೆರೆ: ಕೊಳಕು ನೀರು ಕೊಳವೆ ಬಾವಿ ಮೂಲಕ ಪೂರೈಕೆ

ಶುಚಿ ನೀರು: ಮಾನವ ಹಕ್ಕು ಅಲ್ಲವೇ? ಮನುಷ್ಯನಿಗೆ ಶುಚಿಯಾದ ನೀರು ಒದಗಿಸುವುದು ಕರ್ತವ್ಯ ಅಲ್ಲವೇ? ಈ ಉದ್ದೇಶದಿಂದ ಆರಂಭವಾಗುವ ನೀರು ಪೂರೈಕೆಯ ಖಾಸಗಿ ಸಂಸ್ಥೆಗಳು ಕಲ್ಮಶಯುಕ್ತ ನೀರನ್ನು ಜನರಿಗೆ ಪೂರೈಸುವುದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ?
 read more »

ಬೊಗಸೆಯೊಡ್ಡಿ ನಿಂತಿದೆ ಕರ್ನಾಟಕ

ಒಣಗಿ ನಿಂತ ತುಂಗಭದ್ರಾ ಅಣೆಕಟ್ಟು.

[ಎಲ್ಲಿ ಹೋಗುವಿರಿ, ನಿಲ್ಲಿ ಮೋಡಗಳೇ (ಭಾಗ-೨)]

ಕರ್ನಾಟಕದಲ್ಲೂ ಶೋಚನೀಯ ಸ್ಥಿತಿ

ವಿಳಂಬವಾದರೂ ಮುಂಗಾರು ಮಳೆ ಬೀಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಕಾಯುತ್ತಿದೆ. ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತಳಮಟ್ಟಕ್ಕೆ ಹೋಗಿದ್ದು, ಇದರಿಂದ ಕೃಷಿ ಮತ್ತು ವಿದ್ಯುತ್‌ ಕ್ಷೇತ್ರಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮವಾಗಿದೆ.  
ಮಳೆಯ ಕೊರತೆಯಿಂದ ತತ್ತರಿಸುತ್ತಿರುವ ಕರ್ನಾಟಕದ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಈ ಸಲ ಹೆಚ್ಚೂಕಡಿಮೆ ಶೂನ್ಯದ ಮಟ್ಟಕ್ಕೆ ಹೋಗಿದೆ! ಕೇಂದ್ರ ಸರ್ಕಾರದ ಜೂನ್‌ ೨೫ರವರೆಗಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ, ದೇಶದ ೮೧ ಜಲಾಶಯಗಳ ಸ್ಥಿತಿ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದರಲ್ಲಿ ಕರ್ನಾಟಕದ ಕೃಷ್ಣರಾಜಸಾಗರ, ಕಬಿನಿ, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಮೊದಲಾದ ಅಣೆಕಟ್ಟೆಗಳು ಸೇರಿವೆ.

ಅದರಲ್ಲಂತೂ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ನೀರಿನ ಸಂಗ್ರಹ ಹೆಚ್ಚೂ ಕಡಿಮೆ ಶೂನ್ಯದ ಸ್ಥಿತಿಗೆ ತಲುಪಿದೆ. ಶೇ.೦ ನೀರು ಸಂಗ್ರಹವಿದೆ ಎಂದರೆ, ಅಣೆಕಟ್ಟೆ ಖಾಲಿಯಾದ ಹಾಗೆ. ನೀರಿನ ಸಂಗ್ರಹ ಶೇಕಡಾ ೬೦ಕ್ಕಿಂತ ಕಡಿಮೆಯಾದರೆ, ಹೊರಹರಿವು ನಿಂತಿದೆ ಎಂದೇ ಅರ್ಥ. ಪರಿಸ್ಥಿತಿ ಹೀಗೇ ಮುಂದುವರಿದರೆ ಕುಡಿವ ನೀರಿನ ಪೂರೈಕೆ ಅಸ್ತವ್ಯಸ್ತವಾಗುತ್ತದೆ.  ತುಂಗಭದ್ರಾ ಅಣೆಕಟ್ಟೆಯಲ್ಲಿ ಕೇವಲ ಶೇ.೬ ಮತ್ತು ಲಿಂಗನಮಕ್ಕಿಯಲ್ಲಿ ಕೇವಲ ಶೇ.೮ ನೀರಿದೆ.

ಕುಡಿವ ನೀರು ಮತ್ತು ಕೃಷಿಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ ೧.೧೬೩ ಶತಕೋಟಿ ಕ್ಯುಬಿಕ್‌ ಮೀಟರ್‌. ಆದರೆ, ಈಗ ಈ ಅಣೆಕಟ್ಟೆ ಹೆಚ್ಚೂಕಮ್ಮಿ ಬರಿದಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ ಒಟ್ಟು ಸಾಮರ್ಥ್ಯದ ಶೇ.೪೧ರಷ್ಟು ನೀರಿನ ಸಂಗ್ರಹವಿತ್ತು. ಕಬಿನಿ ಡ್ಯಾಂ ೦.೨೭೫ ಶತಕೋಟಿ ಕ್ಯುಬಿಕ್‌ ಮೀಟರ್‌ ಸಾಮರ್ಥ್ಯ ಪಡೆದಿದೆ. ಆದರೆ ಸದ್ಯ ಇದರ ನೀರಿನ ಸಂಗ್ರಹವೂ ಶೂನ್ಯಕ್ಕೆ ಕುಸಿದಿದೆ.  read more »

ಕುಡಿಯುವ ನೀರಿಗಾಗಿ ಜಗಳ - ಕೊಲೆಯಲ್ಲಿ ಅವಸಾನ

ನೀರಿನಲ್ಲಿ ಕೆಂಪುಹೂ - ಕುಡಿಯುವ ನೀರಿಗಾಗಿ ಕೊಲೆಯ ನೆನಪಿಗೆ

ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?  read more »

ಬಾವಿಗೆ ಮಳೆನೀರಿಂಗಿಸಿದರೆ ಪ್ರಯೋಜನ ಇದೆಯೇ?

ಬಾವಿಗೆ ಮಳೆನೀರಿಳಿಸುವ ಪೈಪ್ ಜಾಲ - ಡಾ. ಮನೋಹರ ಉಪಾದ್ಯರ ಮನೆಯಲ್ಲಿ

ಬಾವಿಗೆ ಮಳೆ ನೀರಿಂಗಿಸಿದರೆ ಪ್ರಯೋಜನ ಇದೆಯೇ? ಈ ಪ್ರಶ್ನೆ ಕೇಳುವವರು ಹಲವರು. ಇದಕ್ಕೆ ಉತ್ತರ ಸಿಗಬೇಕೆಂದಾದರೆ, ಬಾವಿಗೆ ಮಳೆ ನೀರಿಂಗಿಸುವವರ ಬಾವಿಯನ್ನು ಕಣ್ಣಾರೆ ಕಾಣಬೇಕು.  read more »

ಮತ್ತಷ್ಟು ವಿಶೇಷ ಬರಹಗಳು »

ಪ್ರಶ್ನೋತ್ತರ

»146 ಸದಸ್ಯರು, »593 ಪುಟಗಳು, »331 ಪ್ರತಿಕ್ರಿಯೆಗಳು,

Subscribe/Track

Enter your email address:


 Subscribe in a reader

ವೀಡಿಯೋ

ಫ್ಲೋರೋಸಿಸ್ ಹೊಡೆದೋಡಿಸಲು...

ಫ್ಲೋರೈಡಿಗೆ ತುತ್ತಾಗಿರುವ ಕರ್ನಾಟಕದ ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲಿನ ಕಾರ್ಯಕ್ರಮ ಮನೆಗಳಿಗೆ ಮಹಡಿಯಲ್ಲಿ ಹಿಡಿದಿಟ್ಟ ನೀರ ಮೂಲಕ ನೀರು ಒದಗಿಸುವ ಪ್ರಯತ್ನ ಮಾಡಿದೆ. ಒಂದು ಒಳ್ಳೆಯ ಮರಳ ಫಿಲ್ಟರ್ ಹಾಗು ಗಾಳಿಹೋಗದ ಸಂಪು - ಇವೆರಡಿದ್ದರೆ ನೀರು ಶುದ್ಧವಾಗಿರುತ್ತದೆ. ನೀರಲ್ಲಿ ಇ-ಕೋಲಿ ಮುಂತಾದ ಬ್ಯಾಕ್ಟೀರಿಯಗಳ ಇರುವಿಕೆಯನ್ನು ಪತ್ತೆ ಹಚ್ಚಲು H2S ಸ್ಟ್ರಿಪ್ ಟೆಸ್ಟ್ ಬಾಟಲ್ ಬಳಸಲಾಗುತ್ತದೆ. ತದನಂತರ ನೀರನ್ನು ಬಳಸಲಾಗುತ್ತದೆ.
ಈ ವ್ಯವಸ್ಥೆ ಮಳೆನೀರು ಕೊಯ್ಲು ಮುಂಚೆ ಮಾಡಿಲ್ಲದ ಜಾಗದಲ್ಲೂ ಚೆನ್ನಾಗಿ ಕೆಲಸ ಮಾಡುತ್ತಿದೆ.

ಮತ್ತಷ್ಟು ವೀಡಿಯೋಗಳು »

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

dsc_0563.jpg

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಟಿಸಲಾಯಿತು.  read more »

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.

ಜೀವನದಿ ಕಾವೇರಿ

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ನಿಮಗೆ ಏನನಿಸಿತು? ತಪ್ಪದೆ ತಿಳಿಸಿ!

ಈ ಪೋರ್ಟಲ್ ಕುರಿತ ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ಕಳಿಸಿ. ನಿಮ್ಮ ಸಲಹೆ, ಅಭಿಪ್ರಾಯಗಳು ಈ ಸಮುದಾಯ ಕಟ್ಟುವಲ್ಲಿ ಅತ್ಯವಶ್ಯಕ.

ಅಲ್ಲದೆ, ಈ‌ ಸಮುದಾಯದಲ್ಲಿ ನೀವೂ ಬರೆಯಬಹುದು. ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗೆ ನಮಗೊಂದು ಇ-ಮೇಯ್ಲ್ ಕಳುಹಿಸಿ.