ಪ್ರಶ್ನೋತ್ತರ

ಕಾವೇರಿ ತಪ್ಪಲಿನ ನಕ್ಷೆಗಳನ್ನು ನೋಡಿ, ಅಲ್ಲಿ ನೀರು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ನಿಮಗೆ ಗೊತ್ತ? ಇದನ್ನು ನೋಡಿ ಸ್ವತಃ ನೀವೇ ನದಿಯ ಎರಡೂ ಬದಿಯಲ್ಲಿರುವ ಪಟ್ಟಣ ಹಾಗೂ ನಗರಗಳ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತೀರ!
 
ಮತ್ತಷ್ಟು...


ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ

narayanpura-dam.jpg

ಇದೇನು ಬಹಳ ಹಿಂದಿನ ಸಂಗತಿಯಲ್ಲ. ಕೇವಲ ನಾಲ್ಕು ವರ್ಷಗಳ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ದಿನಗಳ ಮಾತು. 2004ರ ಜುಲೈ 24ರಂದು ವಿಧಾನಸಭೆಯಲ್ಲಿ  ಮಾತನಾಡುತ್ತಿದ್ದ ಮುಖ್ಯಮಂತ್ರಿ ಧರ್ಮಸಿಂಗ್ 'ಕೃಷ್ಣಾ ನದಿಯ ನೀರಿನಲ್ಲಿ ತನ್ನ ಪಾಲಿನಿಂದ ಒಂದು ತೊಟ್ಟು ನೀರನ್ನೂ ಕರ್ನಾಟಕ ಆಂಧ್ರಪ್ರದೇಶಕ್ಕೆ ನೀಡದು. ಈ ಮುಖ್ಯಮಂತ್ರಿ ಆಂಧ್ರಪ್ರದೇಶಕ್ಕೆ ನೀರನ್ನು ಬಿಡುವ ತಪ್ಪು ಮಾಡಿಲ್ಲ. ಈ ಬಗೆಯ ಯಾವ ಉದ್ದೇಶವನ್ನೂ ಇಟ್ಟುಕೊಂಡಿಲ್ಲ' ಎಂದು ಆವೇಶ ಭರಿತರಾಗಿ ಹೇಳಿದರು.

ಕರ್ನಾಟಕ ವಿಧಾನಸಭೆಯಲ್ಲಿ ಪ್ರತೀ ವರ್ಷವೂ ಇಂಥ ಆವೇಶ ಭರಿತ ಮಾತುಗಳನ್ನು ಕೃಷ್ಣಾ,  ಕಾವೇರಿ ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ  ತನಕವೂ ಯಾವ ಮುಖ್ಯಮಂತ್ರಿಯೂ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ಣ ಕಾಮಗಾರಿ  ಮುಗಿದಿಲ್ಲದೇ ಇರುವುದರ ಕುರಿತು ಇಷ್ಟು ಅವೇಶದಿಂದ ಮಾತನಾಡಿದ್ದಿಲ್ಲ. ಬಚಾವತ್ ತೀರ್ಪಿನ  ಅನ್ವಯ ತನಗೆ ದೊರೆತಿರುವ ನೀರಿನ ಎಷ್ಟು ಭಾಗವನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ ಎಂಬುದರ  ಬಗ್ಗೆ ಮಾಹಿತಿ ನೀಡುವುದಕ್ಕಾಗಲೀ ಕೇಳುವುದಕ್ಕಾಗಲೀ ಯಾವ ರಾಜಕಾರಣಿಯೂ ಮನಸ್ಸು  ಮಾಡಿಲ್ಲ. ಈಗ ಹೊರಬಿದ್ದಿರುವ ಮಾಹಿತಿಯೇನಿದ್ದರೂ ಆನುಷಂಗಿಕವಾಗಿ ಚರ್ಚೆಗಳ ಮಧ್ಯೆ ಇಲ್ಲವೇ  ಸಂಶೋಧಕರ ಆಸಕ್ತಿಯಿಂದ ಹೊರಬಿದ್ದಿರುವ ವಿಷಯ ಮಾತ್ರ.  ಮುಂದೆ ಓದಿ »

ಮರುಪೂರಣದಿಂದ ಹತ್ತಡಿ ಏರಿದ ನೀರು

ಮರುಪೂರಣದಿಂದ ಹತ್ತಡಿ ಏರಿದ ನೀರು (ಚಿತ್ರ: ನಾ. ಕಾರಂತ ಪೆರಾಜೆ)

ಬರಹ: ನಾ. ಕಾರಂತ ಪೆರಾಜೆ
ಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.

೨೦೦೦ ಸುಮಾರಿಗೆ ಮೇ-ಜೂನ್‌ನಲ್ಲಿ ಬಾವಿ ಪೂರ್ತಿ ಬತ್ತಿತ್ತು. ಕುಡಿನೀರಿಗೂ ತತ್ವಾರ. ನೀರಿನಾಪತ್ತಿನಲ್ಲಿ ನೀರೊದಗಿಸುತ್ತಿದ್ದ ವೆಲಾರಿಯನ್ ಡಿಸೋಜ ಅವರ ಬಾವಿಯಲ್ಲೂ ನೀರು ತಳಕಾಣುತ್ತಿತ್ತು. ಆಗ ನೆರವಿಗೆ ಬಂದವರು ಆದರ್ಶ ಆಸ್ಪತ್ರೆಯ ಡಾ.ಪ್ರಸಾದ ಭಂಡಾರಿ. ತಮ್ಮ ಆಸ್ಪತ್ರೆಯ ಕೊಳವೆ ಬಾವಿಯಿಂದ ನೀರು ಬಳಸಲು ಅವಕಾಶ. ಆಸ್ಪತ್ರೆಗೂ ಮನೆಗೂ ಸುಮಾರು ಒಂದು ಫಲಾಂಗ್ ದೂರ. ಇಷ್ಟು ದೂರ ಪೈಪ್ ತರುವುದೆಂದರೆ ದುಬಾರಿ. ಸುಮಾರು ಅರ್ಧ ದೂರದ ತನಕ ಪೈಪಲ್ಲಿ ನೀರು ತಂದು, ಅಲ್ಲಿಂದ ಮನೆಮಂದಿ ಎಲ್ಲರಿಂದಲೂ ಕರಸೇವೆ! ಪಾತ್ರೆಪಗಡಿಗಳಲ್ಲಿ ಸಂಗ್ರಹ.  ಮುಂದೆ ಓದಿ »

ಮತ್ತಷ್ಟು ವಿಶೇಷ ಬರಹಗಳು »

ಈ ಪೋರ್ಟಲ್ ಗೆ ಭೇಟಿ ನೀಡಿದ ನಿಮಗೆ ಏನು ಅನಿಸಿತು? ಯಾವುದು ಇಷ್ಟವಾಯಿತು? ಯಾವುದು ಇಷ್ಟವಾಗಲಿಲ್ಲ? - ತಪ್ಪದೆ ನಮಗೆ ಬರೆದು ಕಳಿಸಿ!
ಅಲ್ಲದೆ ಈ ಪೋರ್ಟಲ್ ಗೆ ಏನೇನು ಸೇರಿಸಬಹುದು? ನಿಮಗೂ ಆಸಕ್ತಿ ಇದ್ದು ನೀವೂ ಬರೆಯುತ್ತೀರಾ? - ಹೌದಾದರೆ ಈ ಕೂಡಲೆ ನಮಗೆ ಬರೆದು ತಿಳಿಸಿ!
ನಿಮ್ಮ ಇ-ಮೇಯ್ಲ್ ಟೈಪಿಸಿ:

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.


ಜನವರಿ 12, 2007ರಂದು, ಭಾರತ ಜಲ ಪೋರ್ಟಲ್ ನ ಉದ್ಫಾಟನೆಯನ್ನು ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ರವರು ನವದೆಹಲಿಯ ತಮ್ಮ ನಿವಾಸದಲ್ಲಿ ನೆರವೇರಿಸಿದರು.



ಮಳೆನೀರು ಸಂಗ್ರಹಣೆಯ ತಾಂತ್ರಿಕ ಕೈಪಿಡಿ. ಮಳೆಯ ಪೀಪಾಯಿಗಳು, ಪುನರುಜ್ಜೀವನ ಹೊಂಡಗಳು (recharge pits), ಸಂಪುಗಳಲ್ಲಿ (sump) ಮಳೆನೀರನ್ನು ಕಳಿಸುವುದು, ಮಳೆನೀರಿನ ಶೋಧಕಗಳು (filters), ಪುನರುಜ್ಜೀವನ ಬಾವಿಗಳು, ಇವುಗಳ ವಿಷಯವನ್ನು ಚರ್ಚಿಸುತ್ತದೆ.
ಮುಂದೆ ಓದಿ


ನೀರಿನಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುಲು, ಸೂಕ್ಷ್ಮಾಣುಗಳ ಉಂಟಾಗುವ ಪರಿಣಾಮಗಳನ್ನು ಪರಿಹರಿಸುವ ದೃಷ್ಟಿಯಿಂದ, ನೀರಿನ ಸುರಕ್ಷತೆಯನ್ನು ನಿರ್ಣಯಿಸಲು ಮಾಡುವ ಸರಳ ಪರೀಕ್ಷಣೆಗಳು ಅತ್ಯಗತ್ಯ.
ಮುಂದೆ ಓದಿ

Syndicate

Syndicate content