ಕೆರೆನೋಟ – ನೋಟ ೬೪: ಆಗ ಹೀಗಿದ್ದವು… ಜೀವಂತ ಕೆರೆಗಳು! – ೨
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ ೮೧ ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ಕೆ.ಆರ್.ಪುರ ಕೆರೆಯ ಕೆಳಭಾಗದ ಹರಿವಿನ ಭಾಗದಲ್ಲಿರುವ ಈ ಕೆರೆ ೩೩೦(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಪ್ರಧೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿ.ಡಿ.ಪಿಯಲ್ಲಿ ನಮೂದಿಸಲಾಗಿದೆ. ಈ ಪ್ರದೇಶದಲ್ಲಿ ವೃಕ್ಷ ವನ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
೭. ಕೆ.ಆರ್. ಪುರ ಕೆರೆ
ಕೆ.ಆರ್.ಪುರ ಗ್ರಾಮದ ಈಶಾನ್ಯ ಭಾಗಕ್ಕಿರುವ ಹಾಗೂ ಹಳೆ ಮದ್ರಾಸ್ ರಸ್ತೆಗೆ ಹೊಂದಿಕೊಂಡಂತಿರುವ ಕೆ.ಆರ್. ಪುರ ಕೆರೆ ೨೧.೭೮ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೩೦ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಈ ಕೆರೆಯ ಪ್ರದೇಶದಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಜಲಮೂಲವನ್ನೂ ಹಾಗೆಯೇ ಉಳಿಸಿಕೊಳ್ಳಬೇಕು ಎಂದ ತಿಳಿಸಲಾಗಿದೆ. ಕೆರೆಯ ತೀರದಲ್ಲಿ ಸಸಿಗಳನ್ನು ನೆಡಬೇಕು ಮತ್ತು ಜಲಮೂಲದ ವ್ಯಾಪ್ತಿಯನ್ನು ಹಾಗೆಯೇ ಉಳಿಸಿಕೊಂಡು, ಅದನ್ನು ನಿರ್ವಹಣೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಮತ್ತು ಬಿಡಬ್ಲ್ಯುಎಸ್ಎಸ್.ಬಿ ಸುಪರ್ದಿಯಲ್ಲಿ ಈ ಕೆರೆ ಇದೆ.
೮. ಕೌದೇನಹಳ್ಳಿ ಕೆರೆ
ಐ.ಟಿಐ. ಕಾಲೊನಿಯ ಉತ್ತರ ದಿಕ್ಕಿನ ಭಾಗದಲ್ಲಿರುವ ಕೌದೇನಹಳ್ಳಿ ಕೆರೆ ೧೮.೦೬ ಹೆಕ್ಟೇರ್ ಪ್ರದೇಶದಲ್ಲಿದ್ದು, ೩೨೯ನೇ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಏರಿ ಉತ್ತಮ ಸ್ಥಿತಿಯಲ್ಲಿದ್ದು, ತೀರದ ಪ್ರದೇಶದಲ್ಲಿ ಕೆಲವು ಒತ್ತುವರಿಗಳು ಕಾಣುತ್ತಿವೆ. ಸಿಡಿಪಿಯಲ್ಲಿ ಉದ್ಯಾನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ವೃಕ್ಷವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಈ ಕೆರೆಯ ಮಾಲೀಕತ್ವ ಹೊಂದಿದೆ.
೯. ವಿಜಿನಪುರ ಕೆರೆ
ವಿಜಿನಪುರ ಕೆರೆ ಸಣ್ಣದ್ದಾಗಿದ್ದು, ೬.೪೫ ಹೆಕ್ಟೇರ್ ಪ್ರದೇಶದಲ್ಲಿದ್ದು ೩೨೭ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಸುತ್ತಲೂ ಅತಿಕ್ರಮಣ ಕಟ್ಟಡಗಳಿವೆ. ಸಿಡಿಪಿಯಲ್ಲಿ ಇದನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆ ಪ್ರದೇಶವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ ಈ ಕೆರೆ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗದಲ್ಲಿ ಬರುವ ಕೆರೆಗಳ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಮುಂದಿನ ನೋಟದಲ್ಲಿ ಹಳೇ ಮದ್ರಾಸ್ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿ, ಅದರ ಆಸು ಪಾಸಿನಲ್ಲಿರುವ ಕೆರೆಗಳ ಅಂದಿನ ವಿವರಣೆಯನ್ನು ನೀಡಲಾಗುತ್ತದೆ.
………ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್