ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೪೧: ಕೆರೆಗಳ ಪರಿಸ್ಥಿತಿಯ ಕನ್ನಡಿ ನೋಟ-೫

ಕೊಳಚೆ ನೀರು ಮತ್ತು ಘನ ತ್ಯಾಜ್ಯದಿಂದ ಕೂಡಿದ ರಾಜಕಾಲುವೆ, ಕಳೆ ಕಿತ್ತು ಕಾಲುದಾರಿ ಪಕ್ಕದಲ್ಲಿ ಗುಡ್ಡೆ ಹಾಕಿರುವುದು, ಕಟ್ಟಿಕೊಂಡಿರುವ ಹೂಳು ಬಲೆಗಳು/ಕೆಸರಿನಿಂದಾಗಿ ನೀರು ಕೆರೆಯನ್ನು ಸೇರದಿರುವುದು, ಕೆರೆಯ ಒಳಗೆ ತೆರೆದ ರಂಗಮಂದಿರ, ಕೆರೆಯ ಒಳಗೆ ಮಾರ್ಗಾಂತರಣ ಕೊಳವೆ ಪಂಕ್ತಿಯನ್ನು ಹಾಕಿರುವುದು, ಕೆರೆಯಲ್ಲಿ ಉಂಗುರಾಕಾರದ ಏರಿ ಮಾಡಿರುವುದರಿಂದ ತೀರ ಪ್ರದೇಶದ ನಷ್ಟ ಮಾಡಿರುವುದು ಕೆರೆಗಳ ಅಭಿವೃದ್ಧಿಯ ಅಂಶಗಳು.

ಕೆರೆಗಳು ಅಭಿವೃದ್ಧಿಯಾದ ಮೇಲೂ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ತಮ್ಮತನ ಹೊಂದಿಲ್ಲ. ಕೈಗೊಂಡನಹಳ್ಳಿ ಕೆರೆ ಹಾಗೂ ಕೌದೇನಹಳ್ಳಿ ಕೆರೆಗಳಲ್ಲಿ ಇಂತಹ ಪರಿಸ್ಥಿತಿ ಇರುವ ಬಗ್ಗೆ  ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವμದ ವರದಿಯಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ನಿರ್ದಿಷ್ಟ ಫಲಿತಾಂಶಗಳಲ್ಲಿ ನೀಡಲಾಗಿದೆ.

 ಕೈಗೊಂಡನಹಳ್ಳಿ ಕೆರೆ

  • ಕೈಗೊಂಡನಹಳ್ಳಿ ಕೆರೆಯು ವರ್ತೂರು ಕೆರೆ ಸರಣಿಯ ಒಂದು ಭಾಗವಾಗಿದೆ ಮತ್ತು ಪ್ರಸ್ತುತ ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.
  • ಸರ್ಜಾಪುರ ಮುಖ್ಯ ರಸ್ತೆಯು ಕೆರೆಯ ಏರಿಯ ಮೂಲಕ ಹಾದು ಹೋಗುವುದರಿಂದ ಕೆರೆ ಪ್ರದೇಶವು ಕಡಿಮೆಯಾಗಲು ಕಾರಣವಾಗಿದೆ.
  • ಉಂಗುರಾಕಾರದ ಬದಿಯನ್ನು ನಿರ್ಮಿಸಿರುವುದರಿಂದ ಮಳೆನೀರು ಪೈಪ್‌ಲೈನ್‌ಗಳ ಮೂಲಕ ಹರಿಯುವುದಕ್ಕೆ ಸೀಮಿತವಾಗಿದೆ.
  • ಕೊಳಚೆ ನೀರಿನ ಮಾರ್ಗಾಂತರಣ ಪೈಪ್‌ಲೈನನ್ನು, ಮರಗಳನ್ನು ಕಡಿದು ನೀರು ಹರಡಿರುವ ಪ್ರದೇಶದ ಒಳಗೆ ಹಾಕಲಾಗಿದೆ.
  • ಕೆರೆಯ ದಕ್ಷಿಣ ಭಾಗದ ತೀರ ಪ್ರದೇಶದಲ್ಲಿ ಬಫರ್ ವಲಯವನ್ನು ಉಲ್ಲಂಘನೆ ಮಾಡಿ ವಸತಿ ಸಂಕೀರ್ಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.
  • ಕೆರೆ ಅಂಗಳದಲ್ಲಿ ಒಂದು ತೆರೆದ ರಂಗಮಂದಿರವನ್ನು ನಿರ್ಮಿಸಿರುವುದರಿಂದ, ಕೆರೆ ಪ್ರದೇಶವು ಕಡಿಮೆಯಾಗಿದೆ.
  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಯ ನೀರಿನ ಗುಣಮಟ್ಟವನ್ನು ‘ಇ’ ಎಂದು ವರ್ಗೀಕರಿಸಿತ್ತು (ನವೆಂಬರ್ ೨೦೧೩) ಮತ್ತು ಇದು ಅಭಿವೃದ್ಧಿಪಡಿಸಿದ ಕೆರೆಗಳಲ್ಲಿ ಹೊರಸ್ನಾನಕ್ಕೆಂದು ನಿಗದಿಪಡಿಸಿದ್ದ ‘ಬಿ’ ವರ್ಗಕ್ಕಿಂತ ಕೆಳಮಟ್ಟದಲ್ಲಿತ್ತು.
  • ಎಮ್‌ಪಿಎಸ್‌ಎಮ್‌ಎಎಸ್ ಎಂಬ ಸರ್ಕಾರೇತರ ಸಂಸ್ಥೆಯು ಕೆರೆಯ ನಿರ್ವಹಣೆಯ ಹೊಣೆಗಾರಿಕೆಯನ್ನು ತೆಗೆದುಕೊಂಡಿದೆ.

Kaikondahalli-Kere41ಕೆರೆಯ ಒಳಗೆ ತೆರೆದ ರಂಗಮಂದಿರ, ಕೆರೆಯ ಒಳಗೆ ಮಾರ್ಗಾಂತರಣ ಕೊಳವೆಪಂಕ್ತಿಯನ್ನು ಹಾಕಿರುವುದು, ಕೆರೆಯಲ್ಲಿ ಉಂಗುರಾಕಾರದ ಏರಿ ಮಾಡಿರುವುದರಿಂದ ತೀರ ಪ್ರದೇಶದ ನಷ್ಟವಾಗಿದೆ ಈ ಕೆರೆಯ ಪ್ರಮುಖಾಂಶಗಳು.

ಕೌದೇನಹಳ್ಳಿ ಕೆರೆ

ಕೌದೇನಹಳ್ಳಿ ಕೆರೆಯು ರಾಮಮೂರ್ತಿನಗರದಲ್ಲಿರುವ ಭಾರತೀಯ ದೂರವಾಣಿ ಕಾರ್ಖಾನೆಯ (ಐಟಿಐ) ಪಕ್ಕದಲ್ಲಿದೆ.  ಪ್ರಸ್ತುತವಾಗಿ ಕೆರೆಯು ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.

  • ನೈಸರ್ಗಿಕ ಜೌಗುಭೂಮಿಯನ್ನು ಐಟಿಐ ಕಾರ್ಖಾನೆಯು ಒತ್ತುವರಿ ಮಾಡಿದೆ ಮತ್ತು ಕೆ.ಆರ್.ಪುರಂಗೆ ಸಂಪರ್ಕ ಕಲ್ಪಿಸಲು ಮಧ್ಯದಲ್ಲಿ ಒಂದು ರಸ್ತೆಯನ್ನು ನಿರ್ಮಿಸಲಾಗಿದೆ.
  • ಕೆರೆಯು ೫೫ ಎಕರೆ ೦೫ ಗುಂಟೆಗಳ ಪ್ರದೇಶದಲ್ಲಿ ಹರಡಿದೆ ಮತ್ತು ಕೆರೆಯ ಅರ್ಧದμ ಪ್ರದೇಶವನ್ನು ಕಾಲೇಜ್, ಕೊಳೆಗೇರಿ, ವಸತಿ ಬಡಾವಣೆಗಳು, ರಸ್ತೆ, ಮಾರುಕಟ್ಟೆ, ಮುಂತಾದವುಗಳು ಒತ್ತುವರಿ ಮಾಡಿವೆ. ಆದುದರಿಂದ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾಮಗಾರಿಗಳನ್ನು ಉಳಿದ ೨೦ ಎಕರೆ ೩೫ ಗುಂಟೆಗಳ ಪ್ರದೇಶದಲ್ಲಿ ಮಾತ್ರ ಕೈಗೊಳ್ಳಲಾಗಿದೆ.
  • ಕೆರೆಯು ಪೂರ್ಣವಾಗಿ ಕಳೆಯಿಂದ ತುಂಬಿತ್ತು ಮತ್ತು ಅದನ್ನು ತೆಗೆದು ಕಾಲುದಾರಿ ಪಕ್ಕದಲ್ಲಿ ಗುಡ್ಡೆ ಹಾಕಲಾಗಿತ್ತು.
  • ಹೂಳು ಬಲೆಗಳು/ಕೆಸರು ಕಟ್ಟಿಕೊಂಡಿದ್ದರಿಂದ, ಕೆರೆಗೆ ಯಾವುದೇ ಒಳಹರಿವು ಬರುತ್ತಿರಲಿಲ್ಲ ಹಾಗೂ ಕೊಳಚೆನೀರು ಮತ್ತು ಘನತ್ಯಾಜ್ಯದಿಂದ ಕೂಡಿದ ರಾಜಕಾಲುವೆ ಅಕ್ಕಪಕ್ಕದ ವಸತಿಗಳಿಂದ ಕೆರೆಗಳಿಗೆ ಹರಿದು, ಕೆರೆಯನ್ನು ಮಲಿನಗೊಳಿಸುತ್ತಿದ್ದವು.
  • ಮಾಲಿನ್ಯ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲಿಲ್ಲ.

Kaudenahalli-Kere41ಕಳೆಯನ್ನು ಕಿತ್ತು ಕಾಲುದಾರಿ ಪಕ್ಕದಲ್ಲಿ ಗುಡ್ಡೆ ಹಾಕಿರುವುದು, ಕೊಳಚೆನೀರು ಮತ್ತು ಘನ ತ್ಯಾಜ್ಯದಿಂದ ಕೂಡಿದ ರಾಜ ಕಾಲುವೆ, ಕಟ್ಟಿಕೊಂಡಿರುವ ಹೂಳುಬಲೆಗಳು/ಕೆಸರಿನಿಂದಾಗಿ ನೀರು ಕೆರೆಯನ್ನು ಸೇರದಿರುವುದು ಈ ಕೆರೆಯ ಅಭಿವೃದ್ಧಿಯ ಹೈಲೈಟ್ಸ್.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*