ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ

shreeha (21).JPG

ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಟಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨ ಮಾರ್ಚ್ ೨೦೦೯ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಪ್ರಶ್ನಿಸಿದರು:
ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನೀರಿನ ಪ್ರಮಾಣ ಕಡಿಮೆ. ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಹರಿವು ಇರುವುದಿಲ್ಲ. ವಾಸ್ತವ ಹೀಗಿರುವಾಗ
ನದಿ ತಿರುವು ಯೋಜನೆ ಎಷ್ಟರ ಮಟ್ಟಿಗೆ ಸರಿ?

ಈ ಯೋಜನೆಗಾಗಿ ೨೦೦೪ರಲ್ಲಿ ಉಪಗ್ರಹ ಸರ್ವೆ ನಡೆಸಲಾಗಿತ್ತು (ರೂ.೧೫ ಕೋಟಿ ವೆಚ್ಚದಲ್ಲಿ) ಯೋಜನೆಯ ಲಾಭಗಳ ಬಗ್ಗೆ ನದಿ ನೀರು ತಿರುಗಿಸುವ ಸಮಿತಿಯ ಚೇರ್ ಮನ್ ಆಗ
ನೀಡಿದ್ದ ರಂಗುರಂಗಿನ ಚಿತ್ರಣ ಹೀಗಿದೆ: ನೇತ್ರಾವತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಕರ್ನಾಟಕದ ಬಳಕೆಗಾಗಿ ಸರಾಸರಿ ವರುಷಕ್ಕೆ ೪೬೪ ಟಿಎಂಸಿ ನೀರನ್ನು
ಪಡೆಯಬಹುದು. ಇದರಿಂದ ೫೦ ಲಕ್ಷ ಎಕರೆಗಳನ್ನು ನೀರಾವರಿ ಜಮೀನಾಗಿ ಪರಿವರ್ತಿಸಬಹುದು. ರೂ.೧೨,೦೦೦ ಕೋಟಿ ವೆಚ್ಚದ ಯೋಜನೆಯಲ್ಲಿ ಹೂಹಾರದ ವಿನ್ಯಾಸದ ೭೦೦ ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ ರಾಜ್ಯದ ೧೦ ಜಿಲ್ಲೆಗಳಿಗೆ ನೀರುಣಿಸಬಹುದು.

Read More >>