ಜಡೆಯಲ್ಲಿ ಜಿನುಗುವ ಗಂಗೆ

ಚಿತ್ರ: ಜಡೆಯಲ್ಲಿ ಜಿನುಗುವ ಗಂಗೆ

ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗದಗ ಜಿಲ್ಲೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ತುಂಬ ಜನರಿಗೆ ದೈವಿಕ ಭಾವನೆ ಹುಟ್ಟಿಸುತ್ತದೆ.
ಕಾಲಕಾಲೇಶ್ವರ ಗ್ರಾಮಕ್ಕೆ ಹೆಸರು ಬಂದಿರುವುದೇ ಊರಿನ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಿಂದಾಗಿ. ಇಲ್ಲಿರುವ ಸ್ಥಳದಲ್ಲಿ ಶ್ರೀ ಕಾಲಕಾಲೇಶ್ವರನ ಗುಡಿಯಿದೆ. ಇಲ್ಲಿ ಶಿವನ
ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳು ಇಳಿ ಬಿದ್ದಿವೆ. ಈ ಬಿಳಿಲುಗಳಿಂದ ಗಂಗೆಯ ಅವತರಣವಾದಂತೆ ನೀರು ಸದಾ ಜಿನುಗುತ್ತದೆ. ದೈವಿಕ ಭಾವನೆ ಹೊಂದಿರುವವರಿಗೆ, ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರು ಶಿವನ ಜಡೆಯಲ್ಲಿರುವ ಗಂಗೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.

ಮುಂದೆ ಓದಿ >>

[ http://kannada.indiawaterportal.org/node/476/