ಜಲಸಿರಿ
ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತವರ ಬಳಗ ಹೊರತರುತ್ತಿರುವ "ಜಲಸಿರಿ" ಪತ್ರಿಕೆ ಈಗ ಅಂತರ್ಜಾಲದಲ್ಲಿ, ವಾಟರ್ ಪೋರ್ಟಲ್ಲಿನಲ್ಲಿ ಲಭ್ಯ.
೨೦೦೫ ಆಗಸ್ಟಿನಲ್ಲಿ ಪ್ರಾರಂಭವಾದ, ನೀರಿನ ಸುದ್ದಿಗೆಂದೇ ಮೀಸಲಾದ ಈ ಪತ್ರಿಕೆಗೆ ರಾಜ್ಯದಾದ್ಯಂತ ಓದುಗರಿದ್ದಾರೆ. ಮಳೆನೀರು ಸಂರಕ್ಷಣೆ, ನದಿ ನೀರು ಸಂರಕ್ಷಣೆ, ಪಾರಂಪರಿಕ ಜಲ ಮೂಲಗಳ ದಾಖಲಾತಿ, ನೀರ ನಿಶ್ಚಿಂತೆ ಕಂಡುಕೊಂಡ ಯಶೋಗಾಥೆಗಳು - ಇವೆಲ್ಲದರ ಕುರಿತು ಬೆಳಕು ಚೆಲ್ಲುತ್ತದೆ ಈ ಸುದ್ದಿಪತ್ರಿಕೆ.
ಓದಿ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಕಳುಹಿಸಿದರೆ ಈ ಪತ್ರಿಕೆ ತರುವಲ್ಲಿ ಶ್ರಮವಹಿಸಿದ ಉತ್ಸಾಹಿಗಳಿಗೆ ಪ್ರೋತ್ಸಾಹ ನೀಡಿದಂತೆ.

ಮಳೆಶಾಸ್ತ್ರಗಳು

ಮಳೆ ಶಾಸ್ತ್ರಗಳು

   read more »

ಆದ್ರಿ ಮಳೆ ಹಬ್ಬ

ಆದ್ರಿ ಮಳೆ ಹಬ್ಬ

 

   read more »

ಹುಯ್ಯೊ ಹುಯ್ಯೊ ಮಳೆರಾಯ

ಹುಯ್ಯೋ ಹುಯ್ಯೋ ಮಳೆರಾಯ  read more »

ನಾಗರಿಕತೆಯ ಮುಂದೆ ಅರಣ್ಯಗಳು ಹಿಮ್ಮೆಟ್ಟುತ್ತವೆ, ಮರುಭೂಮಿಗಳು ನಾಗರಿಕತೆಯನ್ನು ಹಿಂಬಾಲಿಸುತ್ತವೆ!!

ಚಿಕ್ಕನಾಯಕನಹಳ್ಳಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆಯ ಮಲೆನಾಡು. ಕಣ್ಣು ಹಾಯಿಸಿದಷ್ಟೂ ಅಡಿಕೆ ತೆಂಗಿನ ತೋಟಗಳು, ಗದ್ದೆ ಬಯಲುಗಳು. ಜಿಲ್ಲೆಯ ಇತರೆಡೆ ಬಂಡೆಗಳಿಂದ ಕೂಡಿದ ಬೆಟ್ಟಗಳಾದರೆ ಇಲ್ಲಿ ಹಸಿರು ಹೊದ್ದ ಬೆಟ್ಟ ಸಾಲು. ಮದಲಿಂಗನಕಣಿವೆ ಮತ್ತು ಬೋರನಕಣಿವೆ ಎಂಬ ಎರಡು ಬೃಹತ್ ಬೆಟ್ಟಸಾಲುಗಳು ಈ ತಾಲ್ಲೂಕಿನ ಜೀವನಾಡಿಗಳು. ಮಳೆ ನೀರನ್ನು ನೆಲಕ್ಕೆ ಇಂಗಿಸುವಲ್ಲಿ ಇವುಗಳ ಪಾತ್ರ ಅತಿ ದೊಡ್ಡದು.

ಬೆಟ್ಟಸಾಲುಗಳನ್ನು ಬಿಟ್ಟರೆ ತಾಲ್ಲೂಕಿಗೆ ಪ್ರಮುಖ ನೀರಿನಾಸರೆ ಕೆರೆಗಳು. ಬೆಟ್ಟಗಳು ನೀರು ಇಂಗಿಸಿದರೆ ಕೆರೆಗಳು ನೀರನ್ನು ಸಂಗ್ರಹಿಸಿಟ್ಟುಕೊಂಡು ವರ್ಷೊಂಭತ್ತು ಕಾಲವೂ ತೋಟ ಮತ್ತು ಬೆಳೆಗಳಿಗೆ ಪೂರೈಸುತ್ತಿದ್ದವು. ಕೆರೆಗಳಿಗೆ ನೀರಿನ ಮುಖ್ಯ ಮೂಲ ಅರಣ್ಯಾವೃತ ಬೆಟ್ಟಗಳು. ನಿಸರ್ಗದತ್ತ ಬೆಟ್ಟಗಳಿಂದ ಬರುವ ನೀರನ್ನು ಸಂಗ್ರಹಿಸಲು ಆಯಕಟ್ಟಿನ ಜಾಗಗಳಲ್ಲಿ ಕೆರೆಗಳನ್ನು ಪೂರ್ವಿಕರು ನಿರ್ಮಿಸಿದ್ದಾರೆ. ಇವೆರಡರ ನೆರವಿನಿಂದ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ತೆಂಗು ಹಾಗೂ ಆಹಾರ ಬೆಳೆಗಳಾದ ಭತ್ತ, ರಾಗಿಗಳನ್ನು ರೈತರು ಬೆಳೆಯುತ್ತಿದ್ದರು.  read more »

Subscribe to IWP Kannada list
Email:
Visit this group

Subscribe/Track