ನಾಲ್ಕನೇ ವರ್ಷ ಎರಡನೇ ಸಂಚಿಕೆ

ನಾಗರಿಕತೆಯ ಮುಂದೆ ಅರಣ್ಯಗಳು ಹಿಮ್ಮೆಟ್ಟುತ್ತವೆ, ಮರುಭೂಮಿಗಳು ನಾಗರಿಕತೆಯನ್ನು ಹಿಂಬಾಲಿಸುತ್ತವೆ!!

ಚಿಕ್ಕನಾಯಕನಹಳ್ಳಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆಯ ಮಲೆನಾಡು. ಕಣ್ಣು ಹಾಯಿಸಿದಷ್ಟೂ ಅಡಿಕೆ ತೆಂಗಿನ ತೋಟಗಳು, ಗದ್ದೆ ಬಯಲುಗಳು. ಜಿಲ್ಲೆಯ ಇತರೆಡೆ ಬಂಡೆಗಳಿಂದ ಕೂಡಿದ ಬೆಟ್ಟಗಳಾದರೆ ಇಲ್ಲಿ ಹಸಿರು ಹೊದ್ದ ಬೆಟ್ಟ ಸಾಲು. ಮದಲಿಂಗನಕಣಿವೆ ಮತ್ತು ಬೋರನಕಣಿವೆ ಎಂಬ ಎರಡು ಬೃಹತ್ ಬೆಟ್ಟಸಾಲುಗಳು ಈ ತಾಲ್ಲೂಕಿನ ಜೀವನಾಡಿಗಳು. ಮಳೆ ನೀರನ್ನು ನೆಲಕ್ಕೆ ಇಂಗಿಸುವಲ್ಲಿ ಇವುಗಳ ಪಾತ್ರ ಅತಿ ದೊಡ್ಡದು.

ಬೆಟ್ಟಸಾಲುಗಳನ್ನು ಬಿಟ್ಟರೆ ತಾಲ್ಲೂಕಿಗೆ ಪ್ರಮುಖ ನೀರಿನಾಸರೆ ಕೆರೆಗಳು. ಬೆಟ್ಟಗಳು ನೀರು ಇಂಗಿಸಿದರೆ ಕೆರೆಗಳು ನೀರನ್ನು ಸಂಗ್ರಹಿಸಿಟ್ಟುಕೊಂಡು ವರ್ಷೊಂಭತ್ತು ಕಾಲವೂ ತೋಟ ಮತ್ತು ಬೆಳೆಗಳಿಗೆ ಪೂರೈಸುತ್ತಿದ್ದವು. ಕೆರೆಗಳಿಗೆ ನೀರಿನ ಮುಖ್ಯ ಮೂಲ ಅರಣ್ಯಾವೃತ ಬೆಟ್ಟಗಳು. ನಿಸರ್ಗದತ್ತ ಬೆಟ್ಟಗಳಿಂದ ಬರುವ ನೀರನ್ನು ಸಂಗ್ರಹಿಸಲು ಆಯಕಟ್ಟಿನ ಜಾಗಗಳಲ್ಲಿ ಕೆರೆಗಳನ್ನು ಪೂರ್ವಿಕರು ನಿರ್ಮಿಸಿದ್ದಾರೆ. ಇವೆರಡರ ನೆರವಿನಿಂದ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ತೆಂಗು ಹಾಗೂ ಆಹಾರ ಬೆಳೆಗಳಾದ ಭತ್ತ, ರಾಗಿಗಳನ್ನು ರೈತರು ಬೆಳೆಯುತ್ತಿದ್ದರು.  read more »

ಚೌಕಿ ಬಾವಿಗಳು

100_5993.JPG
ಎಸ್.ಎಸ್.ಎಂ.ಕೊಟ್ರೇಶ್

ಒಂದೊಂದು ಗ್ರಾಮದಲ್ಲಿ ಕನಿಷ್ಠವೆಂದರೂ ೧೦ ಚೌಕಿಬಾವಿಗಳಿರುತ್ತಿದ್ದವು. ೧೦೦ ವರ್ಷಗಳ ಹಿಂದೆ ಕಟ್ಟಿರುವ ಇವು  ಈಗಲೂ ಸುಸ್ಥಿತಿಯಲ್ಲಿವೆ. ೧೯೮೫ ರವರೆಗೂ ನೀರಿತ್ತು, ಆದರೆ ಈಗ ಸಂಪೂರ್ಣ ಬತ್ತಿಹೋಗಿವೆ.  ಹಳ್ಳ-ಹಗರಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಕೊಳವೆಬಾವಿಗಳ ಹಾವಳಿ ಹಾಗೂ ರೈತರ ಲೂಟಿಕೋರತನದಿಂದಾಗಿ ಚೌಕಿಬಾವಿ ಸಂಸ್ಕೃತಿ ನಾಶವಾಯಿತೆನ್ನಬಹುದು.
 
ಚೌಕಿ ಬಾವಿಗಳು ಬಳ್ಳಾರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ಜಲ ಸಂರಕ್ಷಣೆ ಮತ್ತು ಜಲ ವಿತರಣಾ ವ್ಯವಸ್ಥೆ.  ಇವು ತೆರೆದ ಬಾವಿಗಳನ್ನು ಹೋಲುತ್ತವಾದರೂ ಅಷ್ಟು ಆಳವಿಲ್ಲ, ಮತ್ತು ತೆರೆದ ಬಾವಿಗಳ ಅಸ್ತಿತ್ವ ಎಲ್ಲೆಡೆ ಇದ್ದರೆ ಚೌಕಿಬಾವಿಗಳ ಅಸ್ತಿತ್ವ ಕೇವಲ ಹಳ್ಳ, ತೊರೆ  ಮತ್ತು ಹಗರಿಗಳ  ದಡಗಳಲ್ಲಿ ಮಾತ್ರ. ಹಾಗಾಗಿಯೇ ಇವುಗಳನ್ನು   ತಲಪರಿಗೆಗಳ ಮತ್ತೊಂದು ರೂಪ ಎಂದರೆ ತಪ್ಪಾಗುವುದಿಲ್ಲ. ತುಮಕೂರು ಜಿಲ್ಲೆಯಲ್ಲಿ ಹಳ್ಳ ಮತ್ತು ನದಿ ದಡಗಳಲ್ಲಿನ ತಲಪರಿಗೆಗಳಂತೆಯೇ ಚೌಕಿ ಬಾವಿಗಳಿಗೂ ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳದ ನೀರೇ ಆಧಾರ.    ಒಂದೇ ವ್ಯತ್ಯಾಸವೆಂದರೆ ತಲಪರಿಗೆಗಳ ನೀರು ಕಾಲುವೆ ಮೂಲಕ ಹರಿದರೆ ಚೌಕಿ ಬಾವಿಗಳ ನೀರನ್ನು ಕಪಿಲೆ, ಏತಗಳ ಮೂಲಕ ಹರಿಸಲಾಗುತ್ತಿತ್ತು.  read more »

Syndicate content