ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ
ನಾಗರೀಕತೆಯನ್ನು ಬದಲಾಯಿಸಿದ , ನಗರೀಕರಣ, ಉದ್ಯಮೀಕರಣಕ್ಕೆ ಹಾಗು ಹಸಿರು ಕ್ರಾಂತಿಗೆ ನಾಂದಿ ಹಾಡಿದ ಒಂದು ದೊಡ್ಡ ಶಕ್ತಿ ಕೊಳವೆಬಾವಿ. ಕೊಳವೆಬಾವಿ ಅದನ್ನು ಹೀರುವ ಒಂದು ಮಾಧ್ಯಮ ಮಾತ್ರ. ಆದರೆ ಯಾವುದೇ ಕಡಿವಾಣವಿಲ್ಲದೆ ಮನಬಂದ ರೀತಿಯಲ್ಲಿ, ಎಲ್ಲರಿಂದಲೂ ದುರುಪಯೋಗಗೊಂಡಿರುವ ಅಮೂಲ್ಯ ವಸ್ತು - ಅಂತರ್ಜಲ.
ಇಂದಿನ ಕೊಳವೆಬಾವಿ ಸಮಸ್ಯೆಗಳಿಗೆ ಸಮಾಧಾನಗಳನ್ನು ಹುಡುಕಲು ಪೂರಕವಾದ ಒಂದು ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಆದೇ ನುರಿತ ಅಂತರ್ಜಲ ತಜ್ಞ ದೇವರಾಜ ರೆಡ್ಡಿಯವರ ಹೊಸ ಹೊತ್ತಿಗೆ - ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ.
ತಂತ್ರಜ್ಞಾನಕ್ಕೆ ಮಾತ್ರ ಒತ್ತುಕೊಡದೆ, ಅಂತರ್ಜಲದ ಸಂಕ್ಷಿಪ್ತ ಇತಿಹಾಸವನ್ನು ನಮ್ಮ ಮುಂದಿಟ್ಟಿದ್ದಾರೆ. ಪುಸ್ತಕದ ಮೊದಲನೆಯ ಭಾಗದಲ್ಲಿ ದೇವರಾಜ ರೆಡ್ಡಿಯವರು ನಮ್ಮ ದೇಶದ ನೀರಿನ ಪರಿಸ್ಥಿತಿ, ಇತ್ತೀಚೆಗೆ ಆಗಿರುವ ಬದಲಾವಣೆಗಳು, ಪ್ರಕೃತಿಯ ಮೇಲೆ ನಾವು ಹೇರುತ್ತಿರುವ ಒತ್ತಡದ ಪರಿಣಾಮ, ಗಣಿಗಾರಿಕೆಯಿಂದ ಕುಸಿಯುತ್ತಿರುವ ಅಂತರ್ಜಲ, ಹೀಗೆ ಒಂದು ಸಣ್ಣ ಪರಿಚಯದಿಂದ ಆರಂಭಿಸಿ ದೊಡ್ಡ ಸಮಸ್ಯೆಯ ವಿಶ್ಲೇಷಣೆಯಲ್ಲಿ ಕೊನೆಗೊಳಿಸುತ್ತಾರೆ.
ಪುಸ್ತಕದ ಎರಡನೇ ಭಾಗ ಅಂತರ್ಜಲದ ಶೋಷಣೆಯನ್ನು ಕಡಿಮೆಗೊಳಿಸಲು ಬಳಸಬಹುದಾದ ತಂತ್ರಜ್ಞಾನಗಳ ಕುರಿತಾಗಿದೆ. ಈ ಭಾಗದಲ್ಲಿ ರೆಡ್ಡಿಯವರು ಎರಡು ದಶಕಕ್ಕೂ ಹೆಚ್ಚಿನಿಂದ ಅಂತರ್ಜಲವನ್ನು ಸಂಶೋಧಿಸುತ್ತಾ ಬಂದಿರುವವರು. ಕಳೆದ ದಶಕದಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜೀವ ತುಂಬಿದ್ದಾರೆ. ಅವರ ಪರಿಣಿತಿಯ ವೈಶಿಷ್ಟ್ಯ ಬರೀ ತಂತ್ರಜ್ಞಾನ ಅಲ್ಲ, ಜನ ಸಾಮಾನ್ಯನೂ ಸಹ ಸ್ವಶಕ್ತಿಯಿಂದ, ಅತ್ಯಲ್ಪ ಖರ್ಚಿನಿಂದ ತಂತ್ರಜ್ಞಾನವನ್ನು ಅನುಷ್ಟಾನಕ್ಕೆ ತರಬಹುದಾದಂತಹ ಸರಳತೆ ಕೂಡ.
ಮೂರನೆಯ ಭಾಗದಲ್ಲಿ ರೆಡ್ಡಿಯವರ ಜಲಯಜ್ಞದ ಯಶೋಗಥೆಗಳನ್ನು ವಿವರಿಸಲಾಗಿದೆ. ಮನೆ, ಶಾಲೆ, ಕೈಗಾರಿಕೆ ಹೀಗೆ ಪ್ರತಿಯೊಂದು ಜಾಗಕ್ಕೂ ಸೂಕ್ತವಾದ ಉಪಾಯಗಳನ್ನು ಉದಾಹರಿಸುತ್ತಾ, ರೆಡ್ಡಿಯವರು ಸೂರಿನ ಮೇಲೆ ಬೀಳುವ ಮಳೆ ನೀರನ್ನು ಸರಳ ಹಾಗು ಸುಲಭವಾದ ರೀತಿಯಲ್ಲಿ ಬಳಸುವ ವಿಧಾನಗಳನ್ನು ತಿಳಿಸುತ್ತಾರೆ.
ಇನ್ನೆರಡು ತಿಂಗಳುಳಲ್ಲಿ ಗುಡುಗಿಕ್ಕಿ ಹರಿಯುವ ಮಳೆಯನ್ನು ಹಿಡಿಯಲು ತಯಾರಿ ನಡೆಸಲು ಇದು ಸರಿಯಾದ ಸಮಯ. ರೆಡ್ಡಿಯವರ ಈ ಪುಸ್ತಕ ಹಲವರಿಗೆ ಪ್ರೇರಕ ಹಾಗೂ ಮಾರ್ಗದರ್ಶಕವಾಗಲಿದೆ. ಸಮಯೋಚಿತವಾಗಿ ನವಕರ್ನಾಟಕ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.
ಪುಸ್ತಕದ ಐ ಎಸ್ ಬಿ ಏನ್ ಸಂಖ್ಯೆ - 978-81-8467-057-8
ಬೆಲೆ - ರೂ.೮೦
ಲೇಖಕರು
ಹೆಸರು
ಶಾರದಾ ಪ್ರಸಾದ್ ಸಿ ಎಸ್
ಪರಿಚಯ
ಹುಟ್ಟೂರು ಚಿತ್ರದುರ್ಗ. ಬೆಳೆದಿದ್ದು, ಓದಿದ್ದು - ಚಿತ್ರದುರ್ಗ, ಬೆಂಗಳೂರು, ದಾವಣಗೆರೆ. ಕೆಲಸದ ಹೆಸರಿನಲ್ಲಿ ಸ್ವಲ್ಪ ಕಾಲ ಮೈಸೂರು ಹಾಗು ದೆಹಲಿಯಲ್ಲಿ ಕಳೆದದ್ದು ಬಿಟ್ಟರೆ ಈಗೆಲ್ಲ ಬೆಂಗಳೂರೇ ಎರಡನೆಯ ತವರಾಗಿದೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |










Namaste
If I want this book whom can I contact.
Please let me know
Girish
You can get the book here:
Navakarnataka Publications Pvt. Ltd.
Embassy Centre, 11,Crescent Road
Kumara Park (East) Post Box 5159
Bangalore - 560 001
Phone: 080-22203580
You can even contact Devraj Reddy on - 94481 25498
Post new comment