ಕೆರೆನೋಟ-73 ಆಗ ಹೀಗಿದ್ದವು… ಜೀವಂತ ಕೆರೆಗಳು! -11
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳು
- ಅರೇಹಳ್ಳಿ ಸಮೀಪದ ಮೂರು ಸಣ್ಣ ಕೆರೆಗಳು
ಪಂತರಪಾಳ್ಯದ ಸಮೀಪದ ಒಳಾಂಗಣದಲ್ಲಿರುವ ಪ್ರಾಂತೀಯ ಉದ್ಯಾನವನದ ಬಳಿ ಇರುವ ಈ ಮೂರು ಸಣ್ಣ ಕೆರೆಗಳು 709(ಎ)ನಲ್ಲಿ ನೋಂದಣಿಯಾಗಿವೆ. ಈ ಕೆರೆಗಳ ಪ್ರದೇಶಗಳನ್ನು ಪ್ರಾಂತೀಯ ಉದ್ಯಾನವನ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ಪ್ರಾಂತೀಯ ಉದ್ಯಾನವನವನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
- ಗೌಡನಕೆರೆ- ಹಲಗೆವಡೇರಹಳ್ಳಿ
ಹಲಗೆವಡೇರಹಳ್ಳಿಯ ಸಮೀಪದಲ್ಲಿರುವ ಗೌಡನಕೆರೆ 709ನೇ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ವ್ಯಾಪ್ತಿಯನ್ನು ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ಪ್ರದೇಶದಲ್ಲಿ ವೃಕ್ಷವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
- ಬೋವಿಮಾರನಹಳ್ಳಿ ಕೆರೆ
ಹಲಗೆವಡೇರಹಳ್ಳಿಯ ಒಳಭಾಗದಲ್ಲಿರುವ ಬೋವಿಮಾನಹಳ್ಳಿ ಕೆರೆ 1.29 ಹೆಕ್ಟೇರ್ ಪ್ರದೇಶದಲ್ಲಿದ್ದು, 701 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆ ಪ್ರದೇಶವನ್ನು ಪ್ರಾಂತೀಯ ಉದ್ಯಾನವನ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ಪ್ರಾಂತೀಯ ಉದ್ಯಾನವನವನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
- ಗುಂಡುತೋಪ್ ಕೆರೆ
ಮೈಸೂರು ರಸ್ತೆಯ ಒಳಭಾಗದಲ್ಲಿರುವ ಈ ಕೆರೆ 700 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಇದು 0.64 ಹೆಕ್ಟೇರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಪ್ರದೇಶವನ್ನು ಪ್ರಾಂತೀಯ ಉದ್ಯಾನವನ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ಪ್ರಾಂತೀಯ ಉದ್ಯಾನವನವನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
- ದೀವಟಿಗೆರಮನಹಳ್ಳಿ ದಕ್ಷಿಣದ ಕೆರೆ
ಮೈಸೂರು ರಸ್ತೆಯ ದಕ್ಷಿಣ ಭಾಗದಲ್ಲಿರುವ ದೀವಟಿಗೆರಮನಹಳ್ಳಿ ದಕ್ಷಿಣದ ಕೆರೆ 684 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 2.26 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಈ ಕೆರೆ ಪ್ರದೇಶವನ್ನು ಪ್ರಾಂತೀಯ ಉದ್ಯಾನವನ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ಪ್ರಾಂತೀಯ ಉದ್ಯಾನವನವನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿರುವ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳ ಮಾಹಿತಿ, ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳ ವಿವರವನ್ನು ನೀಡಲಾಯಿತು. ಮುಂದಿನ ನೋಟದಲ್ಲಿ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ನಡುವಿನ ಕೆರೆಗಳ ಇನ್ನಷ್ಟು ಕೆರೆಗಳ ಮಾಹಿತಿ ನೀಡಲಾಗುತ್ತದೆ.
(ಮುಂದುವರಿಯಲಿದೆ)
ಚಿತ್ರ-ಲೇಖನ: ಕೆರೆ ಮಂಜುನಾಥ್