ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ಸ್ಮಾರ್ಟ್ ಸಿಟಿ’ ತರಿಭೂಮಿಗಳಿಗಾಗಿ ‘ನಿಸರ್ಗ ಕಲ್ಯಾಣ ವಿಭಾಗ’!

ತರಿಭೂಮಿ ವಿಶ್ವ ದಿನಾಚರಣೆ ಇಂದು. ಫೆಬ್ರುವರಿ ೨, ಶುಕ್ರವಾರ ವಿಶ್ವಾದ್ಯಂತ ಆಚರಣೆ. ೧೯೭೧ರ ‘ರಾಮಸರ್ ಕನ್ವೆನ್ಶನ್’ ನಂತೆ ಜಲಯೋಧರ ಪ್ರಯತ್ನವಿದು. ಈ ವರ್ಷದ ಆಚರಣೆ ಧ್ಯೇಯ “ಪಟ್ಟಣಗಳ ಸುಸ್ಥಿರ ಭವಿಷ್ಯಕ್ಕಾಗಿ ತರಿಭೂಮಿಗಳು”. ೧೯೯೭ ರಲ್ಲಿ ಪ್ರಥಮ ಬಾರಿಗೆ ತರಿಭೂಮಿ ವಿಶ್ವ ದಿನಾಚರಣೆ ಜರುಗಿತು. ಧಾರವಾಡದ ನೇಚರ್ ರಿಸರ್ಚ್ ಸೆಂಟರ್, ನೇಚರ್ ಫಸ್ಟ್ ಇಕೋ ವಿಲೇಜ್, ಹಳ್ಳಿಗೇರಿ ಸಹಯೋಗದಲ್ಲಿ ತರಿಭೂಮಿ ಮತ್ತು ಜಲಮೂಲ ಸಂರಕ್ಷಣೆ ಮಹತ್ವ ಕುರಿತು ಇಂದು ವಿಶೇಷ ಚಿಂತನ-ಮಂಥನ ಕಾರ್ಯಕ್ರಮಗಳು ಆಯೋಜಿತವಾಗಿವೆ. ನಮ್ಮೂರಲ್ಲೂ ‘ರಾಮಸರ್ ಲೇಕ್’ಗಳಾಗಬೇಕಿದೆ!

ಸಕ್ಷಮ ನಗರ, ಸರ್ವ ಸೌಲಭ್ಯ ನಗರಿ ಅಥವಾ ‘ಸ್ಮಾರ್ಟ್ ಸಿಟಿ’ ಆಗುವತ್ತ ಅಂಬೆಗಾಲು ಇಡುತ್ತಿರುವ ಅವಳಿ ನಗg ಹುಬ್ಬಳ್ಳಿ-ಧಾರವಾಡಕ್ಕೆ ‘ಸುಸ್ಥಿರ ಹಸಿರು ಆವರಣ’ದ ಅನಿವಾರ್ಯತೆ ಇದೆ. ಕಾರಣ, ಮಲೆನಾಡಿನ ಸೆರಗು – ಏಳು ಗುಡ್ಡ, ಏಳು ಕೆರೆಗಳ ಅಂದಿನ ‘ಛೋಟಾ ಮಹಾಬಳೇಶ್ವರ’ ಮರಗಳ ಹನನದಿಂದ ಈಗ ಕಾಯ್ದು ಕೆಂಡವಾಗಿದೆ!

ಹಾಗಾಗಿ, ಈ ಸ್ಮಾರ್ಟ್ ಸಿಟಿಯ ತರಿಭೂಮಿಗಳಿಗೆ ಸೀಮಿತವಾಗಿ ‘ನಿಸರ್ಗ ಕಲ್ಯಾಣ ವಿಭಾಗ’ ಸ್ಥಾಪಿಸಿ, ‘ಜೀವಿ ಖಜಾನೆ’ ರೂಪಿಸಬೇಕಿದೆ. ತನ್ಮೂಲಕ ಸ್ಥಳೀಯ ಜೀವಿ ವೈವಿಧ್ಯ, WORLD WT LAND DAY 2018ಕೆರೆ ಅಂಗಳ, ತರಿಭೂಮಿ, ಕೆರೆಗಳು ಮತ್ತು ವಲಸೆ ಹಕ್ಕಿಗಳ ಹಿತ ರಕ್ಷಣೆಗೆ ಯೋಜನೆ ರೂಪುಗೊಳ್ಳಬೇಕು. ಹಿಂದೆ ಅಲ್ಲಿದ್ದ ಜೀವರಾಶಿ ಮತ್ತೆ ಅಲ್ಲಿ ನೆಲೆಸುವಂತೆ ಮಾಡುವ ಯೋಚನೆ ಸ್ಮಾರ್ಟ್ ಸಿಟಿಯ ನೀಲನಕ್ಷೆಯಲ್ಲಿ ಜಾಗೆ ಪಡೆಯುವಂತೆ ಸಾಮುದಾಯಿಕ ಒತ್ತಾಯ ಮಂಡಿತವಾಗಬೇಕಿದೆ.

ಜೀವಿ ವೈವಿಧ್ಯ ರಕ್ಷಣೆಗೆಂದೇ ಅವಳಿ ನಗರ ವ್ಯಾಪ್ತಿಯ ಗಣನೀಯ ಭೂಮಿಯನ್ನು ‘ವಿಶೇಷ ಇಕಾಲಜಿ ವಲಯ’ ಸ್ಥಾಪನೆಗೆ ಮೀಸಲಿಡಬೇಕು ಎಂಬುದು ಪರಿಸರವಾದಿಗಳ ಹಕ್ಕೊತ್ತಾಯ. ಪರಿಸರ ಸ್ನೇಹಿ ಪ್ರವಾಸೋದ್ಯಮದ ಜೊತೆಗೆ, ಇಲ್ಲಿನ ಘಟ್ಟಗಳ ಸುಸ್ಥಿರ ಅಭಿವೃದ್ಧಿಯ ಹೆಬ್ಬಯಕೆಯಿಂದ ಯೋಜನೆ ಸಿದ್ಧವಾಗಬೇಕು ಎನ್ನುತ್ತಾರೆ ‘ಇಕೋ ಟೂರಿಸಮ್’ ಪ್ರತಿಪಾದಕ ಅಮೃತ ಜೋಶಿ.

ಸ್ಮಾರ್ಟ್ ಸಿಟಿ ವ್ಯಾಪ್ತಿಯ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ನವಿಲೂರು ಗುಡ್ಡ, ಸಂಜೀವಿನಿ ಉದ್ಯಾನ, ಸ್ಮಾರ್ಟ್ ಸಿಟಿ ವ್ಯಾಪ್ತಿಯ ಹೊರಗಿನ ಕವಿವಿಯ ಶಾಲ್ಮಲಾ ತಟದ ಕೊಳ್ಳ ಮತ್ತು ಪುಟ್ಟ ಗುಡ್ಡ, ಕೃಷಿ ವಿವಿ ಹಿಂಬದಿಯ ಎತ್ತಿನಗುಡ್ಡ ಮುಂತಾದೆಡೆ ಹವ್ಯಾಸಿ ಚಾರಣಿಗರು ಸುಮ್ಮನೆ ನಡೆದು ಹೋದರೂ ಇಂದಿಗೆ ನವಿಲು, ಬ್ಲೂ ವಿಂಗ್ಡ್ ಪ್ಯಾರಾಕೀಟ್, ಐರ್ನೆಲ್ ಹ್ಯಾಂಗಿಂಗ್ ಪ್ಯಾರೆಟ್, ಮಲಬಾರ್ ಗ್ರೇ ಹಾರ್ನ್‌ಬಿಲ್, ಮಲಬಾರ್ ಪೈಯ್ಡ್ ಹಾರ್ನ್‌ಬಿಲ್, ಮಲಬಾರ್ ಜೈಂಟ್ ಸ್ಕ್ವಿರಲ್, ಗೋಲ್ಡ್ ಫ್ರಂಟೆಡ್ ಕ್ಲೋರೋಪ್ಸಿಸ್ (ಗ್ರೀನ್ ಬುಲ್‌ಬುಲ್), ಗ್ರೇ ಹೆಡೆಡ್ ಫ್ಲೈ ಕ್ಯಾಚರ್ (ನೀಲಗಿರೀಸ್ ಕೆನ್ನಾರೈ ಫ್ಲೈ ಕ್ಯಾಚರ್), ವೆಲ್‌ವೆಟ್ ಫ್ರಂಟೆಡ್ ನಟ್ ಹ್ಯಾಚ್, ಸ್ಕಾರ್‌ಲೆಟ್ ಮಿನಿವೆಟ್, ವೈಟ್ ಬಿಲ್ಡ್ ಟ್ರೀ ಪಾಯ್, ಹಿಲ್ ಮೈನಾ, ಮಲಬಾರ್ ವಿಲಿಂಗ್ ಥ್ರಷ್, ಚೇಂಜೆಟಲ್ ಸಾಕ್ ಐಯ್, ರೆಡ್ ಹೆಡೆಡ್ ಬಾರ್ಬೆಟ್, ಕಾiನ್ ಗೋಲ್ಡನ್ ಬ್ಯಾಕ್ ಉಡ್‌ಪೆಕರ್, ಲೈನೆಟೆಡ್ ಬಾರ್ಬೆಟ್, ಬ್ರೌನ್ ಕ್ಯಾಪ್ಡ್ ಪಿಗ್ಮಿ ವುಡ್‌ಪೆಕರ್, ಸ್ಪೆಕ್ಟ್ಯಾಕಲ್ಡ್ ಟಿಕ್ಯುಲೆಟ್‌ಗಳನ್ನು ಪಕ್ಷಿಪ್ರಿಯರು ದಾಖಲಿಬಹುದು.

ವೈಟ್ ಬಿಲ್ಡ್ ಟ್ರೀ ಪಾಯ್, ಹಿಲ್ ಮೈನಾ, ಮಲಬಾರ್ ವಿಲಿಂಗ್ ಥ್ರಷ್ ಈ ಮೂರು ಹಕ್ಕಿಗಳ ಸಂಗೀತ ಕಚೇರಿ ಬೆಳಗಿನ ಮತ್ತು ಸಂಜೆಯ ಚಾರಣದ ಆಯಾಸವನ್ನೇ ಮರೆಸಬಲ್ಲುದು.. ಗಿಡ, ಮರ, ಬಳ್ಳಿ, ಪುಟ್ಟ ಕೀಟ, ಜೀಡ, ದುಂಬಿಗಳ ಲೆಕ್ಕ ನಾವು ಹಾಕುವುದು ಬಾಕಿ ಇದೆ!

ಸ್ಮಾರ್ಟ್ ಸಿಟಿಯಾಗುತ್ತಿರುವ ಅವಳಿ ನಗರದ ಗುಡ್ಡಗ, ಕೆರೆ ಅಂಗಳದ, ತರಿಭೂಮಿಯ ಜೀವಿವೈವಿಧ್ಯವನ್ನು ಉಳಿಸಿ-ಬೆಳೆಸಲು ಸ್ಥಳೀಯರಿಗೆ ಪ್ರೇರಣೆ ಮತ್ತು ಸೌಕರ್ಯ ನೀಡಬೇಕು. ಜಲಮೂಲ ಮತ್ತು ಗುಡ್ಡಗಳ ಭೂಪ್ರದೇಶವನ್ನು ‘ಜೀವ ಖಜಾನೆಯ ರಕ್ಷಿತ ತಾಣ’ ಎಂದು ಘೋಷಿಸಬೇಕು. ಸ್ಥಳೀWHOLE TANK WITH CONTAMINATED WATERಯರಿಂದಲೇ ಅಲ್ಲಿನ ಜೀವವೈವಿಧ್ಯ ದಾಖಲಾತಿ, ಅವರಿಗೆ ವನ್ಯ ಸಂಪತ್ತಿನ ರಕ್ಷಣೆ ಮತ್ತು ಪೋಷಣೆಯ ತರಬೇತಿ ನೀಡಿ, ಅವರನ್ನೇ ಪ್ರವಾಸಿಗರ ಸ್ಟಡಿ ಗೈಡ್‌ಗಳನ್ನಾಗಿ ನೇಮಿಸಿ, ವನ್ಯರಾಯಭಾರಿಗಳನ್ನಾಗಿಸಬೇಕು. ಇಲ್ಲಿನ ಕೆರೆ-ಕಟ್ಟೆಗಳಿಗೆ, ಕಾಡುಗಳಿಗೆ ಪವೇಶ ನಿರ್ಭಂಧ ಹೇರಿ, ಸ್ವಯಂ ವಿಕಾಸಕ್ಕೆ ಅನುವು ಮಾಡಿಕೊಟ್ಟು ಹಸಿರು ಆವರಣ ಸುಸ್ಥಿರವಾಗಲು ಗಂಭೀರ ಹೆಜ್ಜೆ ಈ ವರ್ಷದ ತರಿಭೂಮಿ ವಿಶ್ವ ದಿನಾಚರಣೆ ಸಂದರ್ಭದಲ್ಲಿ ನಾವಿಡಬೇಕಿದೆ.

ನಗರ ಪ್ರದೇಶದಲ್ಲಿ ಮೈ ಕೊಳೆ ತೊಳೆಯಲು, ಬಟ್ಟೆ ಒಗೆಯಲು, ಪಾತ್ರೆ ತಿಕ್ಕಲು ಬಳಸುವ ಸೋಪ್ ಮತ್ತು ಡಿಟರ್ಜಂಟ್‌ಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ, ರಂಜಕ (ಫಾಸ್ಪರಸ್ -ಪಿ) ಇದೆ. ಇದು ಕೆರೆಯ ಒಡಲು ಸೇರಿ ಕಳೆ ಸಸ್ಯಗಳಿಗೆ ಪ್ರೊಟೀನ್ ಒದಗಿಸುತ್ತಿದೆ! ಒಂದರ್ಥದಲ್ಲಿ ಹುಲುಸಾದ ರಸಗೊಬ್ಬgವಾಗಿದೆ. ಜೊತೆಗೆ ನಮ್ಮ ಪಾಯಖಾನೆ ತ್ಯಾಜ್ಯ, ಗಟಾರು ನೀರು, ಆಕಳು-ಎಮ್ಮೆಗಳ ಗಂಜಲು ಸಾರಜನಕವನ್ನೂ ಸೇರಿಸಿ, ಅಲ್ಲಲ್ಲಿ ಗುಡ್ಡೆಗಟ್ಟಲೆ ಬಿಸಾಕಿದ ಬೂದಿ ರಾಶಿಯಿಂದ ಪೊಟ್ಯಾಷ್ ಸೇರಿಕೊಂಡು ‘ಎನ್-ಪಿ-ಕೆ’ ತ್ರಿವೇಣಿ ಸಂಗಮವೇ ಕೆಲಗೇರಿ, ನವಿಲೂರು, ಉಣಕಲ್ ಕೆರೆಯನ್ನು ಗಬ್ಬೆಬ್ಬಿಸಿದೆ. ಹಯಾಸಿಂಥ್ ಸಸ್ಯ ಇಡೀ ಕೆರೆಗಳನ್ನೇ ಆಪೋಷಿಸಲು ಹೊಂಚು ಹಾಕಿದೆ. ತರಿಭೂಮಿ ಈಗ ಹಕ್ಕಿ ಮಿತ್ರರಿಗೆ ಅಡುಗೆ ಮನೆಯಲ್ಲ!

ಈ ಸಸ್ಯ ಕೆರೆಯ ನಾಲ್ಕೂ ಬದಿಯಲ್ಲಿ ಶುದ್ಧ ನೀರನ್ನೆಲ್ಲ ನುಂಗಿ, ತೇಲು ಬೇರುಗಳ ಏಕಾಣುಜೀವಿಗಳ ಮೂಲಕ ಮೀಥೇನ್ ಹೊಮ್ಮಿಸುತ್ತ ನೀರಿನಲ್ಲಿನ ಆಮ್ಲಜನಕವನ್ನು ಪೂರ್ತಿ ನಾಶ ಪಡಿಸಿ, ಜಲಚರಗಳನ್ನೆಲ್ಲ ಕೊಂದು, ನಾನಾ ಬಗೆಯ ಸೊಳ್ಳೆ, ಕ್ರಿಮಿ ಕೀಟಗಳಿಗೆ ಆಶ್ರಯ ನೀಡುತ್ತ ಇಡೀ ಜಲಮೂಲವನ್ನೇ ಗಬ್ಬೆಬ್ಬಿಸಿದೆ. ಸದ್ಯ, ನವಿಲೂರು ಕೆರೆಯ ನಾಲ್ಕೂ ಬದಿಗಳು ಬಯಲು ಶೌಚದ ಕೂಪಗಳು.

ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ

TITTIBHA IN NAVALURU TANK WET LAND AREAಸಾಬೂನಿನಲ್ಲಿರುವ ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ ಎಂದು ಸುಮಾರು ೬ ದಶಕಗಳ ಹಿಂದೆ ಕೆನಡಾ ಸರ್ಕಾರ (೧೯೬೦) ಕಂಡುಕೊಂಡಿದೆ. ಮಾತ್ರವಲ್ಲ, ಎಲ್ಲ ಸಾಬೂನುಗಲ್ಲೂ ರಂಜಕವನ್ನು ಕಡಿಮೆ ಮಾಡಿಸಿತು. ಅಮೆರಿಕೆಯಲ್ಲೂ (೧೯೮೦) ಈ ಪ್ರಯತ್ನ ನಡೆದಿತ್ತು. ಆದರೆ, ಸಾಬೂನು ತಯಾರಿಕೆ ಉದ್ಯಮಿಗಳೆಲ್ಲ ಒಟ್ಟಾಗಿ ಸೇರಿ ಸರ್ಕಾರದ ದಾರಿ ತಪ್ಪಿಸಲು ಏನೆಲ್ಲ ಕುತಂತ್ರ ಹೂಡಿದವು. ‘ಮನುಷ್ಯರ ತ್ಯಾಜ್ಯದಿಂದ ಬರುವ ಸಾರಜನಕವೇ ಕೆರೆಗಳ ಉಸಿರುಗಟ್ಟಿಸುತ್ತದೆ’ ಎಂದು ವಾದಿಸಿದರು. ‘ಚರಂಡಿ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸದ ಯಂತ್ರಗಳದ್ದೇ ತಪ್ಪಿದೆ’ ಎಂದರು. ‘ರಂಜಕಯುಕ್ತ ಸಾಬೂನಿಗೆ ನಿಷೇಧ ಹೇರಿದರೆ ಉದ್ಯಮ ಸ್ವಾತಂತ್ರ್ಯಕ್ಕೆ ಭಂಗ’ ಎಂದು ಮುನಿಸಿಪಾಲಿಟಿಗಳ ವಿರುದ್ಧ ದಾವೆ ಹೂಡಿದವು!

ಆದರೆ, ಜನರ ಒತ್ತಾಯದಿಂದ, ಡಿಟರ್ಜಂಟ್ ಬಿಲ್ಲೆ ಮತ್ತು ಪುಡಿಗಳಲ್ಲಿ ರಂಜಕದ ಬಳಕೆಯನ್ನು ಶೇ.೧೦ಕ್ಕೆ ಇಳಿಸಬೇಕೆಂದು ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿಗೆ ಬಂತು. ಕೆಲ ರಾಜ್ಯಗಳಲ್ಲಿ ಸಾಬೂನಿನಲ್ಲಿ ರಂಜಕದ ಲವಲೇಶವೂ ಇರುವಂತಿಲ್ಲ ಎಂದು ಕಟ್ಟಿನಿಟ್ಟಿನ ಆದೇಶ ಹೊರಟಿತು. ಅಲ್ಲಿ ಬಳಸಲಾಗುವ ಸಾಬೂನಿನ ರಕ್ಷಾಪುಟದ ಮೇಲೆ ರಂಜಕ ಪಿ- ಸೊನ್ನೆ ಎಂದು ನಮೂದಿಸಲೇಬೇಕು. ಇತರ ಕಡೆ ಸಾಬೂನಿಲ್ಲಿ ರಂಜಕ -ಪಿ ಪ್ರಮಾಣವೆಷ್ಟು? ಎಂಬುದನ್ನು ನಮೂದಿಸಿ ಮಾರುವುದು ಕಡ್ಡಾಯಗೊಳಿಸಲಾಯಿತು. ಚರಂಡಿ ನೀರಿನಿಂದ ರಂಜಕವನ್ನು ಬೇರ್ಪಡಿಸಿ ಕೆರೆಗೆ ನೀಡುವ ಯಂತ್ರೋಕರಣ ಸ್ಥಾಪನೆ ಜಾರಿಗೆ ಬಂತು. ನಗರದ ಕೆರೆಗಳು ಉಸಿರಾಡುವಂತಾಯಿತು.

 ಶೇ.೧೮ ರಿಂದ ೨೫ರ ನಡುವೆ ರಂಜಕ!

ಧಾರವಾಡದ ಅಂಗಡಿಗಳಲ್ಲಿ ಸಿಗುವ ನಾನಾ ಬಗೆಯ ಡಿಟರ್ಜಂಟ್‌ಗಳಲ್ಲಿ ರಂಜಕ ಇದೆಯೇ? ಇಲ್ಲವೋ? ಗೊತ್ತೇ ಆಗುವುದಿಲ್ಲ. ೨೦೦೭ರಲ್ಲಿ ಮೈಸೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಡಾ. ಮಹದೇವಪ್ಪ ಹಾಗೂ ಅವರ ವಿದ್ಯಾರ್ಥಿಗಳು, ಜನಪ್ರಿಯ ಸಾಬೂನು ಪುಡಿಯ ಮೂರು ಪ್ರತಿಷ್ಟಿತ ಬ್ರ್ಯಾಂಡ್‌ಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಶೇ.೧೮ ರಿಂದ ೨೫ರ ನಡುವೆ ರಂಜಕವಿರುವುದನ್ನು ಪತ್ತೆ ಮಾಡಿದರು. ಇಷ್ಟು ಭಾರೀ ಪ್ರಮಾಣದ ರಂಜಕ ಸಾಬೂನಿಲ್ಲಿದ್ದರೆ ಊರಿನ ಕೆರೆಯನ್ನು ಬತ್ತಿಸಲು ಎರಡೇ ಲಾಂಡ್ರಿಗಳು ಸಾಕು!

ನಮ್ಮಂಥ ಶ್ರೀಸಾಮಾನ್ಯರು ಡಿಟರ್ಜಂಟ್ ಉದ್ಯಮಗಳ ಲಾಭ ಗಳಿಕೆಗೆ ನೆರವಾಗುತ್ತ, ಒಂದಾದ ಮೇಲೊಂದರಂತೆ ಊರಿನ ಕೆರೆಗಳನ್ನು ಮುಗಿಸುತ್ತ ಹೋಗುವುದೋ? ಅಥವಾ ವಿಶ್ವ ಬ್ಯಾಂಕಿನ ಸಾಲ ಪಡೆದು ಡ್ರೆಜರ್ ಯಂತ್ರಗಳಿಂದ ಕಳೆ ತೆಗೆಯಬಯಸುವ ಗುತ್ತಿಗೆದಾರರಿಗೆ ಲಾಭಾಂಶವನ್ನು ಹೆಚ್ಚಿಸುತ್ತ ಹೋಗೋಣವೇ? ಅಥವಾ ಕೆರೆಯ ಅಂಗಳದಲ್ಲಿ ಇಟ್ಟಂಗಿ ಭಟ್ಟಿಯನ್ನೆತ್ತಿ ಲಾಭ ಮಾಡಿಕೊಳ್ಳ ಬಯಸುವವರಿಗೆ ಹೂಂ.. ಎನ್ನೋಣವೇ? ಅಥವಾ ಕೆರೆಯನ್ನೇ ನುಂಗಿ ರಿಯಲ್ ಎಸ್ಟೇಟ್ ದಂಧೆ ಮಾಡಬಯಸುವ ನಿವೇಶನ ಹಪಾಹಪಿಗಳಿಗೆ ಜೈ ಎನ್ನೋಣವೇ? ಎಂಬುದನ್ನು ನಿರ್ಧರಿಸಲು ಸ್ಮಾರ್ಟ್ ಸಿಟಿ ಯೋಜಕರಿಗೆ ಮತ್ತು ‘ಸ್ಟೇಕ್ ಹೋಲ್ಡರ್ಸ್’ಗೆ ಇದು ಸಕಾಲ..

ವಿದೇಶಗಳಲ್ಲಿ ಖಾಲಿ ಬ್ಯಾಟರಿ ಸೆಲ್‌ಗಳನ್ನೂ, ಉರಿದ ಬಲ್ಬ್‌ಗಳನ್ನೂ ತಯಾರಕರೇ ವಾಪಸ್ ಪಡೆಯಬೇಕೆಂದು ನಿಯಮವಿದೆ. ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲೂ ತರಿಭೂಮಿ ಮತ್ತು ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಹಾಗೆ ಮಾಡುವುದು ಅನಿವಾರ್ಯ. ಡಿಟರ್ಜಂಟ್ ತಯಾರಕರೇ ಕೆರೆಯ ಜೊಂಡು ಕಳೆಯನ್ನು ಸ್ವಚ್ಛಗೊಳಿಸಬೇಕು.. ಅಥವಾ ಕಳೆಯನ್ನು ತಮ್ಮ ಫ್ಯಾಕ್ಟರಿಗೆ ಸಾಗಿಸಿಕೊಂಡು ‘ರಿಯೂಸ್’, ‘ರಿಚಾರ್ಜ್’ ಅಥವಾ ‘ರಿ ಸೈಕಲ್’ ಮಾಡಿಕೊಳ್ಳಲಿ. ಆಗ, ರಂಜಕವಿರದ ಸೋಪು ತಯಾರಿಸುವ ಅನಿವಾರ್ಯತೆ ಅವರಿಗೆ ಮನವರಿಕೆಯಾದೀತು.. ಖರೀದಿಸುವಾಗಲೂ ನಾವು ಸ್ಮಾರ್ಟ್ ಸಿಟಿ ನಿವಾಸಿಗಳು ರಂಜಕ ಇರz ಸೋಪುಗಳಿಗೆ ಆದ್ಯತೆ ನೀಡೋಣ.  –     ಪಂ. ಮುಂಜಿ. ಗಿನ್ನೀಸ್ ದಾಖಲಿತ ಪರಿಸರವಾದಿ.

ನಾವು, ನಮ್ಮ ಬಟ್ಟೆ, ನಮ್ಮ ವಾಹನಗಳನ್ನು ಶುದ್ಧವಾಗಿಟ್ಟುಕೊಳ್ಳಲು ಸುತ್ತಲಿನ ಪರಿಸರಕ್ಕೆ ಏನೆಲ್ಲ ರಾಡಿ ಎರಚುತ್ತಿದ್ದೇವೆ. ೪೦ಕ್ಕೂ ಹೆಚ್ಚು ಪ್ರಜಾತಿಯ ವಲಸೆ ಹಕ್ಕಿಗಳು ಬಂದಿಳಿಯುತ್ತಿದ್ದ ನವಿಲೂರು, ಕೆಲಗೇರಿ ಕೆರೆಯ ತರಿಭೂಮಿ ಕೊಚ್ಚೆ ರಾಡಿಯಂತಾಗಿರುವುದೇ ಇದಕ್ಕೆ ಸಾಕ್ಷಿ. ಪೇಂಟೆಡ್ ಸ್ಟಾರ್ಕ್, ಸ್ಪೂನ್ ಬಿಲ್, ಪೆಲಿಕಾನ್, ಪಿನ್ ಟೇಲ್ ಡಕ್, ಸ್ಪಾಟ್ ಬಿಲ್ಡ್ ಡಕ್ .. ಹೀಗೆ. ನಮಗಿಂತ ಮೊದಲೇ ಈ ಭೂಮಿಗೆ ಬಂದ ಅನೇಕ ಜೀವಿಗಳು ತಮ್ಮ ಪರಿಸರವನ್ನು ಹೇಗೆ ಶುಚಿಯಾಗಿಟ್ಟುಕೊಳ್ಳುತ್ತವೆ? ಪರಿಸರ ಸ್ನೇಹಿ ಬದುಕು ಅವುಗಳಿಗೆ ಕಲಿಸಿದವರಾರು? ನಮ್ಮಂಥ ವಿಚಾರವಂತರಿಗೆ ಅವು ಬುದ್ಧಿ ಹೇಳುವಂತಾಗಿದೆ ನಮ್ಮ ನಡೆ. ಸ್ಮಾರ್ಟ್ ಸಿಟಿಯಲ್ಲಾದರೂ ಈ ಬಗ್ಗೆ ಚಿಂತನೆ-ಯೋಜನೆ ರೂಪುಗೊಳ್ಳಲಿ.  –     ಪ್ರೊ. ಗಂಗಾಧರ ಕಲ್ಲೂರ, ವನ್ಯಜೀವಿಗಳ ಗೌರವ ಕ್ಷೇಮ ಪಾಲಕ, ಧಾರವಾಡ ಜಿಲ್ಲೆ.

ಚಿತ್ರ-ಲೇಖನ:   ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*