ಕೆರೆನೋಟ – ಕೆರೆನೋಟ-68 ಆಗ ಹೀಗಿದ್ದವು… ಜೀವಂತ ಕೆರೆಗಳು! – 6
ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….
ಅರಣ್ಯ ಇಲಾಖೆಯ ಕೆರೆಗಳು
- ಚನ್ನಪ್ಪನಹಳ್ಳಿ ಕೆರೆಗಳು (ಮೂರು ಕೆರೆಗಳು)
ವರ್ತೂರು ರಸ್ತೆಯ ಹಳ್ಳಿಯ ಉತ್ತರ ಭಾಗದಲ್ಲಿ ಚನ್ನಪ್ಪನಹಳ್ಳಿಯ ಮೂರು ಕೆರೆಗಳು ಇವೆ. ಈ ಮೂರೂ ಕೆರೆಗಳು 313 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 11.13 ಹೆಕ್ಟೇರ್ ಪ್ರದೇಶದಲ್ಲಿವೆ. ಸಿಡಿಪಿಯಲ್ಲಿ ಈ ಕೆರೆಗಳ ಜಾಗವನ್ನು ಪ್ರಾದೇಶಿಕ ಉದ್ಯಾನವನ ಎಂದು ಗುರುತಿಸಲಾಗಿದೆ. ಈ ಪ್ರದೇಶವನ್ನು ಪ್ರಾದೇಶಿಕ ಉದ್ಯಾನವನವನ್ನಾಗಿಯೇ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
- ಕುಂದಲಹಳ್ಳಿ ಕೆರೆ
ವರ್ತೂರು ರಸ್ತೆ ಮತ್ತು ವೈಟ್ ಫೀಲ್ಡ್್ ರಸ್ತೆಗಳಿಗೆ ಸಂಪರ್ಕ ಬೆಳೆಸುವ ರಸ್ತೆಯ ಬಳಿ ಈ ಕುಂದಲಹಳ್ಳಿ ಕೆರೆ ಇದೆ. 315ನೇ ಸಂಖ್ಯೆಯಲ್ಲಿ ನೋಂದಣಿಯಾಗಿರುವ ಈ ಕೆರೆ, 10.48 ಹೆಕ್ಟೇರ್್ ಪ್ರದೇಶದಲ್ಲಿದೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲವು ಪ್ರದೇಶದಲ್ಲಿ ಕಟ್ಟಡಗಳಿವೆ. ಈ ಕೆರೆ ಪ್ರದೇಶವನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ಪ್ರದೇಶವನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಈ ಕೆರೆಯ ಮಾಲೀಕತ್ವ ಹೊಂದಿದೆ.
- ದ್ಯಾವಸಂದ್ರ ಕೆರೆ
ಮದ್ರಾಸ್ ರೈಲ್ವೆ ಲೈನ್್ಗೆಹೊಂದಿಕೊಂಡಂತಿರುವ ದ್ಯಾವಸಂದ್ರ ಕೆರೆ, ವೈಟ್ ಫೀಲ್ಡ್್ ರಸ್ತೆಯ ಉತ್ತರ ಭಾಗದಲ್ಲಿದೆ. 325ನೇ ಸಂಖ್ಯೆಯಲ್ಲಿ ನೋಂದಣಿಯಾಗಿರುವ ಈ ಕೆರೆ 5.81 ಹೆಕ್ಟೇರ್ ವ್ಯಾಪ್ತಿ ಹೊಂದಿದೆ. ಸಿಡಿಪಿಯಲ್ಲಿ ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯನ್ನೂ ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.
- ಸಿಂಗಸಂದ್ರ ಕೆರೆ
ಹೊಸೂರು ರಸ್ತೆಯ ಸಮೀಪವಿರುವ ಸಿಂಗಸಂಗ್ರ ಹಳ್ಳಿಯ ಬಳಿ ಇರುವ ಸಿಂಗಸಂದ್ರ ಕೆರೆ, 0.6 ಹೆಕ್ಟೇರ್್ ಪ್ರದೇಶದ ಸಣ್ಣ ಕೆರೆಯಾಗಿದ್ದು, 237 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಪ್ರದೇಶ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಾಗಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಕೆರೆಯ ಮಾಲೀಕತ್ವ ಹೊಂದಿದೆ.
- ಗಾರ್ವೆಬಾವಿ ಪಾಳ್ಯ ಕೆರೆ
ಹೊಸೂರು ರಸ್ತೆಯ ಸಮೀಪವಿರುವ ಗಾರ್ವೆಬಾವಿ ಪಾಳ್ಯದ ಬಳಿ ಇರುವ ಗಾರ್ವೆಬಾವಿ ಪಾಳ್ಯ ಕೆರೆ 9.03 ಹೆಕ್ಟೇರ್ ಪ್ರದೇಶದಲ್ಲಿದ್ದು, 237(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದೆ ಈ ಕೆರೆಯ ಪ್ರದೇಶ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಾಗಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಕೆರೆಯ ಮಾಲೀಕತ್ವ ಹೊಂದಿದೆ.
- ಮಂಗಮ್ಮನಪಾಳ್ಯದ ದಕ್ಷಿಣ ಭಾಗದ ಕೆರೆ
ಹೊಸೂರು ರಸ್ತೆಗೆ ಹೊಂದಿಕೊಂಡಂತಿರುವ ಮಂಗಮ್ಮನಪಾಳ್ಯದ ದಕ್ಷಿಣ ಭಾಗದಲ್ಲಿರುವ ಮಂಗಮ್ಮನಪಾಳ್ಯ ಕೆರೆ 3.23 ಹೆಕ್ಟೇರ್ ಪ್ರದೇಶದಲ್ಲಿದ್ದು, 237(ಬಿ) ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯ ಪ್ರದೇಶ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಾಗಿದೆ. ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅರಣ್ಯ ಇಲಾಖೆ ಕೆರೆಯ ಮಾಲೀಕತ್ವ ಹೊಂದಿದೆ.
ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯಭಾಗದಲ್ಲಿರುವ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಮುಂದಿನ ನೋಟದಲ್ಲಿ ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಕೆರೆಗಳ ವಿವರ ನೀಡಲಾಗುತ್ತದೆ.
……….ಮುಂದುವರಿಯಲಿದೆ
ಚಿತ್ರ-ಲೇಖನ: ಕೆರೆ ಮಂಜುನಾಥ್