ಬೆಂಗಳೂರಿನಲ್ಲಿ ಜಲ ರಕ್ಷಣೆಗಾಗಿ ೧೧ನೇ ಜಲ ಸಿನಿಮೋತ್ಸವ ಡಿಸೆಂಬರ್ ೧೪-೧೫, ೨೦೧೭
ನೀರಿನ ಮೂಲಗಳು ಇಂದು ಅಳಿವಿನ ಅಂಚಿನಲ್ಲಿವೆ, ಜಲ ಮೂಲಗಳ ಉಳಿವು, ಮಹತ್ವ ಮತ್ತು ಜಾಗೃತಿಯ ನ್ನು ಜನ ಸಮುದಾಯಕ್ಕೆ ತಲುಪಿಸುವ ಉದ್ದೇಶದಿಂದ ಬೆಂಗಳೂರು ಫಿಲಂ ಸೊಸೈಟಿ, ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಜೈನ್ ಗ್ರೂಫ್ ಆಫ್ ಇನ್ಟಿಟ್ಯೂಷನ್ಸ್ ಹಾಗೂ ಅಕ್ಷನ್ ಏಡ್ ಸಂಸ್ಥೆಗಳು ಜಂಟಿಯಾಗಿ ಡಿಸೆಂಬರ್ ೧೪-೧೫ ರಂದು ‘ನೀರಿನ ದ್ವನಿಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಜಲ ರಕ್ಷಣೆಗಾಗಿ ೧೧ ನೇ ಜಲ ಸಿನಿಮೋತ್ಸವ – ೨೦೧೭ ನ್ನು ಸಂಘಟಿಸಿವೆ
ಎರಡು ದಿನಗಳ ಕಾಲ ನಡೆಯುವ ಈ ಜಲ ಸಿನಿಮೋತ್ಸವದಲ್ಲಿ ವೀಕ್ಷಕರಿಗೆ ನೀರಿನ ಬಗೆಗೆ ಅರಿವು ನೀಡುವ ಚಿತ್ರಗಳನ್ನು ಪ್ರದರ್ಷಿಸಲಾಗುತ್ತದೆ. ಇಲ್ಲಿ ೬೦ ದೇಶ ಗಳ ಸರಿಸುಮಾರು ೨೨೯ ಚಿತ್ರಗಳು ಪ್ರದರ್ಷನಗೊಳ್ಳಲಿವೆ.
ಕೇವಲ ನೀರು ಮತ್ತು ಜಲಚರಗಳ ಮಹತ್ವದ ಬಗೆಗೆ ಬೆಳಕನ್ನು ಚೆಲ್ಲುವ ಚಿತ್ರಗಳಲ್ಲದೆ ಏಷ್ಯಾದ ಬೃಹತ್ ಸವಿಸ್ತಾರವಾದ ಸಿಹಿ ನೀರಿನ ಕೆರೆ ಎಂದು ಪ್ರಸಿದ್ದವಾದ ಕಾಶ್ಮೀರದ ವುಲಾರ್ ಕೆರೆ ಸಂರಕ್ಷಣೆ ಕುರಿತಂತೆ ಕಾಶ್ಮೀರಿ ನಿರ್ದೆಶಕ ಜಲಾಲುದ್ದೀನ್ ಬಾಬಾ ‘ಸೇವಿಂಗ್ ದಿ ಸೇವಿಯರ್ ಸ್ವಚ್ಛ ಬಾರತ್’ ಸಿನಿಮಾ ನಿರ್ದೆಶಿಸಿದ್ದು ಇದು ಜಲ ಸಿನಿಮೋತ್ಸವದಲ್ಲಿ ಪ್ರದರ್ಷನಗೊಳ್ಳಲಿದೆ. ಇದಲ್ಲದೆ ಸ್ಪೇನ್ ಚಿತ್ರ ‘ ದಿ ಸಿ ಆಫ್ ಲೈಫ್’ ಬೆಂಗಾಲಿಯ ‘ಝೂಲ್ ಮೋಲಿಯಾ’ ಆಸ್ಸಾಂನ ‘ರಿದಂ ಆಫ್ ಬ್ರಹ್ಮಪುತ್ರ’ ‘ಸುಂದರ್ ಬನ್ಸ್ ರೈಸಿಂಗ್’ ‘ದಿ ಬ್ಲೂ ಕ್ಯಾಪ್’ ಸೇರಿದಂತೆ ಹಲವಾರು ಹಿಂದಿ ತಮಿಳು ಸೇರಿದಂತೆ ಖ್ಯಾತ ನಿರ್ದೆಶಕರುಗಳ ಚಿತ್ರಗಳು ಎರಡು ದಿನಗಳ ಕಾಲ ಪದರ್ಷನಗೊಳ್ಳಲಿವೆ.
ಜಲ ಸಿನಿಮೋತ್ಸವದ ಪ್ರವೇಶ ಉಚಿತವಾಗಿದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟಡ ಚರ್ಚ್ ಸ್ಟ್ರೀಟ್ ಮತ್ತು ಜಯನಗರದ ೯ ನೇ ಬ್ಲಾಕ್ ನಲ್ಲಿರುವ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನಡೆಯಲಿದೆ ಇದರ ಜೊತೆಯಲ್ಲಿ ಸಂವಾದ ಚರ್ಚೆಗಳು ಸಹ ನಡೆಯಲಿವೆ