ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ 65 : ಆಗ ಹೀಗಿದ್ದವು… ಜೀವಂತ ಕೆರೆಗಳು! -3

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನ ಜೀವಂತ ಕೆರೆಗಳು ಹೇಗಿದ್ದವು ಎಂದು ಹೇಳಲಾಗಿದೆ. ಇದೀಗ ಜೀವಂತ ಕೆರೆಗಳ ಪರಿಸ್ಥಿತಿಯ ಹೇಗಿತ್ತು, ಅದನ್ನು ಏನು ಮಾಡಬಹುದು ಎಂಬ ಶಿಫಾರಸುಗಳನ್ನೂ ನೀಡಲಾಗಿದೆ. ಅಂತಹ 81 ಕೆರೆಗಳ ಪಟ್ಟಿಯ ವಿವರಣೆ ಹೀಗೆ ಸಾಗುತ್ತದೆ….

ಹಳೇ ಮದ್ರಾಸ್ ರಸ್ತೆ ಮತ್ತು ಹೊಸುರು ರಸ್ತೆ ಮಧ್ಯಭಾಗದಲ್ಲಿರುವ ಕೆರೆಗಳು

  1. ಪರಪ್ಪನ ಅಗ್ರಹಾರದ ಪಶ್ಚಿಮ ಭಾಗದ ಕೆರೆ

ಪರಪ್ಪನ ಅಗ್ರಹಾರದ ಪಶ್ಚಿಮಭಾಗದಲ್ಲಿರುವ ಹಾಗೂ ಪರಪ್ಪನ ಅಗ್ರಹಾರದಲ್ಲಿರುವ ಹೊಸ ಕೇಂದ್ರೀಯ ಕಾರಾಗೃಹಕ್ಕೆ ಹೊಂದಿಕೊಂಡಂತಿರುವ ಕೆರೆ KereKaraguvaSamaya - for Nota 22ಇದು. 222 ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, 15.65 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸ್ಯಗಳನ್ನು ನೆಟ್ಟು ಸಮೃದ್ಧಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.  ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಈ ಕೆರೆ ಇದೆ.

  1. ಕಸವನಹಳ್ಳಿ ಕೆರೆ

ಸರ್ಜಾಪುರ ರಸ್ತೆಯ ಸಮೀಪವಿರುವ ಕಸವನಹಳ್ಳಿ ಕೆರೆ 17.42 ಹೆಕ್ಟೇರ್ ವಿಸ್ತೀರ್ಣಹೊಂದಿದ್ದು, 226 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸ್ಯಗಳನ್ನು ನೆಡಬೇಕು. ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಇಲ್ಲಿ ವೃಕ್ಷವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದು ಅರಣ್ಯ ಇಲಾಖೆ ವಶದಲ್ಲಿದೆ.

  1. ಅಂಬಲಿಪುರ ಮೇಲಿನ ಕೆರೆ

ಸರ್ಜಾಪುರ ರಸ್ತೆ ಮತ್ತು ಅಗರಂ ಸಮೀಪವಿರುವ ಅಂಬಲಿಪುರ ಮೇಲಿನ ಕೆರೆ 29.33 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ 227 ಸಮಖ್ಯೆಯಲ್ಲಿ ನೋಂದಣಿಯಾಗಿದೆ. ಈ ಕೆರೆಯನ್ನು ಉದ್ಯಾನವನ ಮತ್ತು ತೆರೆದ ಪ್ರದೇ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ತೀರ ಪ್ರದೇಶವನ್ನೂ ಸಸ್ಯಗಳನ್ನು ನೆಟ್ಟು ಸಮೃದ್ಧಪಡಿಸಬೇಕು. ಮತ್ತು ಅಭಿವೃದ್ಧಿಯ ಹಂತದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿಯಾಗಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಕೆರೆಯ ಮಾಲೀಕತ್ವ ಅರಣ್ಯ ಇಲಾಖೆಯದ್ದು.

  1. ಕೈಕೊಂಡನಹಳ್ಳಿ ಕೆರೆ

ಕೈಗೊಂಡನಹಳ್ಳಿ ಹಾಗೂ ಸರ್ಜಾಪುರ ರಸ್ತೆಯ ಸಮೀಪವಿರುವ ಕೈಗೊಂಡನಹಳ್ಳಿ ಕೆರೆ 228 ಸಂಖ್ಯೆಯಲ್ಲಿ  ನೋಂದಣಿಯಾಗಿದ್ದು, 27.09 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆಯ ವ್ಯಾಪ್ತಿಯನ್ನು ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ತೀರದ ಪ್ರದೇಶದಲ್ಲಿ ಸಸ್ಯಗಳನ್ನು ನೆಡಬೇಕು. ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಇಲ್ಲಿ ವೃಕ್ಷವನವನ್ನು ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದು ಅರಣ್ಯ ಇಲಾಖೆ ವಶದಲ್ಲಿದೆ.

  1. ಹರಳೂರು ಕೆರೆ

ಹರಳೂರು ಕೆರೆ ಸರ್ಜಾಪುರ ರಸ್ತೆಯ ದಕ್ಷಿಣ ಭಾಗದ ಒಳಪ್ರದೇಶದಲ್ಲಿ ಗ್ರಾಮಕ್ಕೆ ಹೊಂದಿಕೊಂಡದಂತಿದೆ. ಇದು 3.23 ಹೆಕ್ಟೇರ್ ಪ್ರದೇಶದಲ್ಲಿದ್ದು, 229 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಸಿಡಿಪಿಯಲ್ಲಿ ಈ ಕೆರೆಯ ಪ್ರದೇಶದಲ್ಲಿ ಭಾಗಶಃ ವ್ಯಾಪ್ತಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಹಾಗೂ ಭಾಗಶಃ ಪ್ರದೇಶವನ್ನು ಹಸಿರು ವಲಯ ಎಂದು ನಮೂದಿಸಲಾಗಿದೆ. ಈ ಕೆರೆಯ ತೀರ ಪ್ರದೇಶವನ್ನೂ ಸಸ್ಯಗಳನ್ನು ನೆಟ್ಟು ಸಮೃದ್ಧಪಡಿಸಬೇಕು. ಮತ್ತು ಅಭಿವೃದ್ಧಿಯ ಹಂತದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿಯಾಗಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಕೆರೆಯ ಮಾಲೀಕತ್ವ ಅರಣ್ಯ ಇಲಾಖೆಯದ್ದು.

  1. ಅಂಬಲಿಪುರ ಕೆಳಗಿನ ಕೆರೆ

ಅಂಬಲಿಪುರ ಗ್ರಾಮದ ಸಮೀಪ ಹಾಗೂ ಸರ್ಜಾಪುರ ರಸ್ತೆಯ ಒಳಭಾಗದಲ್ಲಿರುವ ಅಂಬಲಿಪುರ ಕೆಳಗಿನ ಕೆರೆ 3.23 ಹೆಕ್ಟೇರ್ ಪ್ರದೇಶದಲ್ಲಿದೆ. 230 ಈ ಕೆರೆ ನೋಂದಣಿ ಸಂಖ್ಯೆ. ಈ ಕೆರೆಯ ವ್ಯಾಪ್ತಿಯಲ್ಲಿ ಉದ್ಯಾನವನ ಮತ್ತು ತೆರೆದ ಪ್ರದೇಶ ಎಂದು ಸಿಡಿಪಿಯಲ್ಲಿ ನಮೂದಿಸಲಾಗಿದೆ. ಈ ಕೆರೆಯ ತೀರದಲ್ಲಿ ಸಸ್ಯಗಳನ್ನು ನೆಡಬೇಕು. ಈ ಕೆರೆಯ ಪ್ರದೇಶದ ಸುತ್ತಮುತ್ತ ಅಭಿವೃದ್ಧಿ ಆಗುವ ಸಮಯದಲ್ಲಿ ಇಲ್ಲಿ ವೃಕ್ಷವನ ಅಭಿವೃದ್ಧಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದು, ಅರಣ್ಯ ಇಲಾಖೆ ಸುಪರ್ದಿಯಲ್ಲಿ ಈ ಕೆರೆ ಇದೆ.

ಲಕ್ಷ್ಮಣರಾವ್ ವರದಿಯಲ್ಲಿನ ಜೀವಂತ ಕೆರೆಗಳಲ್ಲಿ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಭಾಗ ಹಾಗೂ ಹಳೇ ಮದ್ರಾಸ್ ರಸ್ತೆ ಮತ್ತು ಹೊಸುರು ರಸ್ತೆ ಮಧ್ಯಭಾಗದಲ್ಲಿರುವ

ಕೆರೆಗಳ ಮಾಹಿತಿಯನ್ನು ಈವರೆಗೆ ನೀಡಲಾಯಿತು. ಮುಂದಿನ ನೋಟದಲ್ಲಿ ಅರಣ್ಯ ಇಲಾಖೆಯ ಸಂಪೂರ್ಣ ಅಧೀನದಲ್ಲಿದ್ದ ನಗರವನ್ನು ಸುತ್ತುವರಿದಿರುವ ಕೆರೆಗಳ ಅಂದಿನ ವಿವರಣೆಯನ್ನು ನೀಡಲಾಗುತ್ತದೆ.

(ಮುಂದುವರಿಯಲಿದೆ)

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*