ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೭: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’? – ಭಾಗ ೨

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ  ೪೬ ಉಪಯೋಗಿಸದ ಕೆರೆಗಳಿದ್ದವು. ಅವುಗಳು ಹೇಗಿದ್ದವು, ಏನು ಮಾಡಬಹುದಿತ್ತು.. ಪಟ್ಟಿ ಮುಂದುವರಿದಿದೆ ನೋಡಿ…

. ಲಿಂಗರಾಜಪುರ ಕೆರೆ

Rachenahalliಈ ಕೆರೆ ೩೪೨ನೇ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ೫.೪೮ ಹೆಕ್ಟೇರ್ ಪ್ರದೇಶದಲ್ಲಿರುವ ಲಿಂಗರಾಜಪುರ ಕೆರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ಅಭಿವೃದ್ಧಿಯಾಗಿದ್ದು, ಒಳಹರಿವಿನ ಪ್ರದೇಶ ಮತ್ತು ಅಚ್ಚುಕಟ್ಟು ಪ್ರದೇಶ ಒತ್ತುವರಿಯಾಗಿದೆ. ಏರಿ ಉತ್ತಮ ಸ್ಥಿತಿಯಲ್ಲಿದ್ದು, ಸಾಕಷ್ಟು ಆಳ ಹೊಂದಿದೆ. ಸಿ.ಡಿ.ಪಿ ಪ್ರಕಾರ, ಭಾಗಶಃ ಉದ್ಯಾನವನ ಮತ್ತು ತೆರೆದ ಪ್ರದೇಶವಾಗಬೇಕು. ಭಾಗಶಃ ಪ್ರದೇಶ ವಸತಿ ಪ್ರದೇಶವಾಗಬೇಕು. ಸಮಿತಿ ಈ ಕೆರೆಯನ್ನು ಜಲಮೂಲವನ್ನಾಗಿ ರಕ್ಷಿಸಿಕೊಳ್ಳಬೇಕು. ನೀರು ಒಳಹರಿವಿನ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಕಾಡಬೇಕು. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೬. ಬ್ಯಾಟಗುಟ್ಟೆಪಾಳ್ಯ ಕೆರೆ

ಈ ಕೆರೆ ೩೩೯ ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ಬ್ಯಾಟಗುಟ್ಟೆಪಾಳ್ಯ ಕೆರೆ ೧.೯೮ ಹೆಕ್ಟೇರ್ ಪ್ರದೇಶದಲ್ಲಿದೆ. ಬಿ.ಡಿ.ಎ ತನ್ನ ಯೋಜನೆಗಳನ್ನು ಸುತ್ತಲೂ ಹೊಂದಿದೆ. ಸಿ.ಡಿ.ಪಿ. ಪ್ರಕಾರ ಈ ಕೆರೆ ಅಭಿವೃದ್ಧಿಗೊಂಡ ಪ್ರದೇಶದಲ್ಲಿದೆ. ಸಮಿತಿ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೭. ಚನ್ನಸಂದ್ರ ಕೆರೆ

ಕೆರೆ ಸಂಖ್ಯೆ ೩೪೦ರಲ್ಲಿ ನೋಂದಣಿಯಾಗಿರುವ ಚನ್ನಸಂದ್ರ ಕೆರೆ ೧೫.೪೨ ಹೆಕ್ಟೇರ್ ಪ್ರದೇಶದಲ್ಲಿದೆ. ಬಿ.ಡಿ.ಎ ತನ್ನ ಯೋಜನೆಗಳಲ್ಲಿ ಈ ಕೆರೆಯನ್ನು ಒತ್ತುವರಿಮಾಡಿದೆ. ಬಿ.ಡಿ.ಎ ಬಾಹ್ಯ ಪ್ರದೇಶದಲ್ಲಿ ಅಭಿವೃದ್ಧಿ ಮಾಡಿದ್ದು, ಮಧ್ಯ ಪ್ರದೇಶವನ್ನು ಬಿಟ್ಟಿದೆ. ಸಿ.ಡಿ.ಪಿ ಪ್ರಕಾರ ಭಾಗಶಃ ಉದ್ಯಾನ ಮತ್ತು ತೆರೆದ ಪ್ರದೇಶ ಹಾಗೂ 200 ಅಡಿ ರಸ್ತೆಯನ್ನು ತೋರಿಸಲಾಗಿದೆ. ಸಮಿತಿ ಈ ಕೆರೆಯ ಏರಿಯನ್ನು ಸಂರಕ್ಷಿಸಿ ವೃಕ್ಷವನವನ್ನಾಗಿಸಬೇಕು ಎಂದು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೮. ಚನ್ನಸಂದ್ರ ಕೆರೆ ()

ಚನ್ನಸಂದ್ರ ಕೆರೆ ಮತ್ತೊಂದಿದ್ದು ಈ ಕೆರೆ 305 ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಇದರ ವ್ಯಾಪ್ತಿ ೭.೪೮ ಹೆಕ್ಟೇರ್. ಈ ಕೆರೆಯ ಸುತ್ತಲೂ ಬಿ.ಡಿ.ಎ ಯೋಜನೆಗಳೇ ಇದ್ದು, ಇದು ಸಣ್ಣ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಭಾಗಶಃ ಪ್ರದೇಶದಲ್ಲಿ ಉದ್ಯಾನ ಮತ್ತು ಸಾರಿಗೆಗೆ ಉಪಯೋಗವಾಗಬೇಕು. ಸಮಿತಿ ಈ ಕೆರೆಯ ಏರಿಯನ್ನು ವೃಕ್ಷವನವಾಗಿಸಲು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

ಹಳೆ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆ ನಡುವೆ ಇರುವ ಕೆರೆಗಳು

೯. ಗಿಡ್ಡನಕೆರೆ ಹೂಡಿ

ಈ ಕೆರೆ ೩೨೨ ಸಂಖ್ಯೆಯಾಗಿ ನೋಂದಣಿಯಾಗಿದ್ದು, ಗಿಡ್ಡನಕೆರೆ ೯.೮೪ ಹೆಕ್ಟೇರ್ ಪ್ರದೇಶದಲ್ಲಿದೆ. ವೈಟ್ ಫೀಲ್ಡ್ ರಸ್ತೆಯ ದಕ್ಷಿಣ ಭಾಗದಲ್ಲಿದೆ. ವೈಟ್ ಫೀಲ್ಡ್ ರಸ್ತೆ ನಡುವೆ ಅಚ್ಚುಕಟ್ಟು ಪ್ರದೇಶವಿದ್ದು, ಈ ಕೆರೆಯ ಭಾಗಶಃ ಭಾಗದಲ್ಲಿ ಕೈಗಾರಿಕೆ ಬಳಕೆಗಾಗಿ ಅಭಿವೃದ್ಧಿಯಾಗಿದೆ. ಸಿ.ಡಿ.ಪಿ ಪ್ರಕಾರ ಇಲ್ಲಿ ಭಾಗಶಃ ಉದ್ಯಾನ ಮತ್ತು ಭಾಗಶಃ ಕೈಗಾರಿಕೆ ಪ್ರದೇಶವಾಗಬೇಕು. ಸಮಿತಿ ಈ ಕೆರೆಯ ಏರಿಯನ್ನು ವೃಕ್ಷವನವಾಗಿಸಿ ಎಂದ ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೧೦. ಹೂಡಿ ಕೆರೆ

ಹೂಡಿ ಕೆರೆ ೩೨೨(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದ್ದು, ೫.೩೨ ಹೆಕ್ಟೇರ್ ಪ್ರದೇಶದಲ್ಲಿದೆ. ಹೂಡಿ ಹಳ್ಳಿಯ ಉತ್ತರಭಾಗದಲ್ಲಿದೆ. ಇದರ ಏರಿಯನ್ನು ಒತ್ತುವರಿಮಾಡಲಾಗಿದೆ. ಸಿ.ಡಿ.ಪಿ. ಪ್ರಕಾರ ಭಾಗಶಃ ಉದ್ಯಾನ ಮತ್ತು ರಸ್ತೆಗಾಗಿ ಬಳಕೆ ಮಾಡಬೇಕು. ಸಮಿತಿ ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಲು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

…..ಮುಂದುವರಿಯಲಿದೆ

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*