ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ – ನೋಟ ೫೬: ಹೇಗಿದ್ದವು, ಏನಾದವು ‘ಉಪಯೋಗಿಸದ ಕೆರೆಗಳು’?

ಲಕ್ಷ್ಮಣರಾವ್ ಅವರು ನೀಡಿದ ವರದಿಯಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಎರಡು ವರ್ಗವಾಗಿ ವಿಭಾಗಿಸಿದ್ದರು. ಒಂದು, ಉಪಯೋಗಿಸದ ಕೆರೆಗಳು. ಮತ್ತೊಂದು, ಜೀವಂತ ಕೆರೆಗಳು. ಇದರಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದವು. ಹೀಗೆಂದು ವರದಿಯಲ್ಲಿ ಹೇಳಿದ್ದೇ ತಪ್ಪಾಯಿತೇನೋ ಎಂದು ಈಗೆನಿಸುತ್ತದೆ. ಏಕೆಂದರೆ ಉಪಯೋಗಿಸದ ಕೆರೆ ಎಂದು ವರದಿಯಲ್ಲಿ ಬಂದಮೇಲೆ, ಹಲವರ ಕಣ್ಣು ಆ ಕೆರೆಗಳ ಮೇಲೆ ಕಣ್ಣು ಬಿತ್ತು.

Dodda-Chikkka hejjajiಬೆಂಗಳೂರಿನಲ್ಲಿ ೪೬ ಉಪಯೋಗಿಸದ ಕೆರೆಗಳಿದ್ದು, ಇದರಲ್ಲಿ ಕೆಲವು ಕೆರೆಗಳನ್ನು ಹಲವು ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಇನ್ನು ೮೧ ಜೀವಂತ ಕೆರೆಗಳು ಬೆಂಗಳೂರಿನಲ್ಲಿವೆ. ಹಸಿರವಲಯ ಮತ್ತು ಮೆಟ್ರೊಪಾಲಿಟನ್ ಪ್ರದೇಶದ ಗಡಿಯಲ್ಲಿ ೨೬೨ ಕೆರೆಗಳಿವೆ. ಬಹುತೇಕ ಜೀವಂತ ಕೆರೆಗಳಿರುವುದೆಲ್ಲ ಹಸಿರುವಲಯದಲ್ಲಿ. ಈ ಕೆರೆಗಳ ಅಚ್ಚುಕಟ್ಟುಗಳನ್ನು ಒತ್ತುವರಿ ಮಾಡಿಕೊಳ್ಳಬಾರದು, ಹಾಳುಮಾಡಬಾರದು. ಈ ಕೆರೆಗಳಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಈವರೆಗೂ ಪ್ರಸ್ತಾಪಿಸಿಲ್ಲ. ಅವುಗಳನ್ನು ಜಲಮೂಲಗಳನ್ನಾಗಿಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಲಕ್ಷ್ಮಣರಾವ್ ವರದಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ.

ಅಂದು, ೪೬ ಕೆರೆಗಳನ್ನು ಉಪಯೋಗಿಸದ ಕೆರೆಗಳು ಎಂದು ನಮೂದಿಸಲಾಗಿದ್ದರ ಪೈಕಿ ೧೦ ಕೆರೆಗಳನ್ನು ತೋಟಗಾರಿಕೆ ಇಲಾಖೆ, ಬೆಂಗಳೂರು ನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ಇತರೆ ಸಂಸ್ಥೆಗಳು ಬಳಸಿಕೊಂಡಿದ್ದವು. ಈ ಎಲ್ಲ ಉಪಯೋಗಿಸದ ಕೆರೆಗಳ ಬಗ್ಗೆ ಲಕ್ಷ್ಮಣರಾವ್ ಸಮಿತಿ ಸಮೀಕ್ಷೆ ನಡೆಸಿ, ಅಲ್ಲಿಗೆ ತೆರಳಿ ಸೂಕ್ತ ವಿವರದೊಂದಿಗೆ ಅಲ್ಲಿ ಏನು ಮಾಡಬೇಕು ಎಂಬ ಸಲಹೆಯನ್ನೂ ನೀಡಿತ್ತು: ಆ ಕೆರೆಗಳ ಮಾಹಿತಿ ಹೀಗಿದೆ:

ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆ ನಡುವೆ ಬರುವ ಕೆರೆಗಳು:

೧. ಶಿವನಹಳ್ಳಿ ಕೆರೆ:

ಈ ಕೆರೆ ೩೫೭ನೇ ಸಂಖ್ಯೆಯಾಗಿ ನೋಂದಣಿಯಾಗಿದೆ. ಈ ಕೆರೆಯ ಪೂರ್ಣ ಹೆಸರು- ಶಿವನಹಳ್ಳಿ ಕೆರೆ (ಯಲಹಂಕ ಸಮೀಪ) ೧೦ ಹೆಕ್ಟೇರ್ ಪ್ರದೇಶದಲ್ಲಿದೆ. ಈ ಕೆರೆ ಯಲಹಂಕದ ಪೂರ್ವ ಭಾಗದಲ್ಲಿರುವ ಟೈಲ್ಸ್ ಮತ್ತು ಇಟ್ಟಿಗೆ ಫ್ಯಾಕ್ಟರಿ ಸಮೀಪ ಇದೆ. ಕೆರೆಯ ಏರಿಯನ್ನು ರೈಲ್ವೆ ಸೇತುವೆಗಾಗಿ ಬಳಸಿಕೊಳ್ಳಲಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾಗಿಲ್ಲ. ಸಿಡಿಪಿಯಲ್ಲಿ ಈ ಕೆರೆಯನ್ನು ಉದ್ಯಾನ ಮತ್ತು ತೆರೆದ ಪ್ರದೇಶವಾಗಿ ಉಪಯೋಗಿಸಿಕೊಳ್ಳಲು ನಮೂದಿಸಲಾಗಿದೆ. ಭಾಗಶಃ ಪ್ರದೇಶವನ್ನು ರೈಲು ಹಳಿ ಮತ್ತು ಬೈ-ಪಾಸ್ ರಸ್ತೆಗಾಗಿ ಸಾರಿಗೆ ಉದ್ದೇಶಕ್ಕೆ ಬಳಸಿಕೊಳ್ಳಲು ಹೇಳಲಾಗಿದೆ. ಲಕ್ಷ್ಮಣರಾವ್ ವರದಿಯಲ್ಲಿ ಈ ಕೆರೆಯನ್ನು ವೃಕ್ಷವನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಲಾಗಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೨. ಕಾಳಗೊಂಡನಹಳ್ಳಿ ಕೆರೆ:

ಈ ಕೆರೆ ನೋಂದಣಿ ಸಂಖ್ಯೆ ೩೪೫. ಕಾಳಗೊಂಡನಹಳ್ಳಿ ಕೆರೆ ೧೦.೦೯ ಹೆಕ್ಟೇರ್ ಪ್ರದೇಶದಲ್ಲಿದೆ. ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ಸರ್ಕಾರ ಈ ಕೆರೆಯ ಜಾಗವನ್ನು ಮಂಜೂರು ಮಾಡಿರುವುದರಿಂದ, ಸಾಕಷ್ಟು ಪ್ರದೇಶ ಉಲ್ಲಂಘನೆಯಾಗಿದೆ. ಸಿ.ಡಿ.ಪಿಯಲ್ಲಿ ಈ ಕೆರೆಯನ್ನು ಅರೆ-ಸಾರ್ವಜನಿಕ ಬಳಕೆ, ಅಂದರೆ ವೈದ್ಯಕೀಯ ಕಾಲೇಜು ಬಳಕೆಗೆ ಎಂದು ನಮೂದಿಸಲಾಗಿದೆ. ಈ ಕೆರೆಯನ್ನು ಆಗಲೇ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿರುವುದರಿಂದ, ಸಮಿತಿ ಯಾವುದೇ ಸಲಹೆ ನೀಡಿಲ್ಲ.

೩. ಬ್ಯಾಪ್ಪನಹಳ್ಳಿ ಕೆರೆ

ಈ ಕೆರೆ ೨೯೩(ಎ) ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಬ್ಯಾಪ್ಪನಹಳ್ಳಿ ಕೆರೆಯ ಸುತ್ತಲೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಂಜೂರುಗೊಂಡ ಯೋಜನೆಗಳೇ ಇವೆ. ಸಿ.ಡಿ.ಪಿ ಪ್ರಕಾರ ಈ ಕೆರೆ ಪ್ರದೇಶ ಉದ್ಯಾನವನ ಮತ್ತು ತೆರೆದ ಪ್ರದೇಶವಾಗಿರಬೇಕು. ಲಕ್ಷ್ಮಣರಾವ್ ಸಮಿತಿ ಈ ಕೆರೆಯನ್ನು ವೃಕ್ಷವನವನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದೆ. ಇದು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

೪. ಬ್ಯಾಪ್ಪನಹಳ್ಳಿಯ ಉತ್ತರಕ್ಕಿರುವ ಕೆರೆ

ಈ ಕೆರೆ ೨೯೨ ಸಂಖ್ಯೆಯಾಗಿ ನೋಂದಣಿಯಾಗಿದ್ದು, ಬ್ಯಾಪ್ಪನಹಳ್ಳಿ ಕೆರೆಯ ಉತ್ತರಭಾಗಕ್ಕಿದೆ. ಈ ಕೆರೆಯ ಸುತ್ತಲೂ ಬಿ.ಡಿ.ಎ. ಯೋಜನೆಗಳೇ ಇವೆ. ಸಿ.ಡಿ.ಪಿ. ಪ್ರಕಾರ ಈ ಕೆರೆಯನ್ನು ಉದ್ಯಾನ ಮತ್ತು ತೆರೆದ ಪ್ರದೇಶವಾಗಿಸಬೇಕು. ಸಮಿತಿ ಈ ಕೆರೆಯನ್ನು ವೃಕ್ಷವನವನ್ನಾಗಿಸಿ ಎಂದು ಸಲಹೆ ನೀಡಿದೆ. ಈ ಕೆರೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.

……(ಮುಂದುವರಿಯಲಿದೆ)

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*