ಉಳಿಸ ಬನ್ನಿ
ಧೋ ಸುರಿದ ಮಳೆ
ಮಣ್ಣ ತಂಪಾಗಿಸಿ ನಡೆಯಿತು
ಬಿದ್ದ ನೀರು ಹರಿದು ಸರಿದು
ಕಡಲ ಸೇರಿತು
ಮತ್ತೆ ಧಗೆ , ಉರಿ
ಜಳಕದಂತೆ ಹೊಯ್ದ ನೀರು
ಆರಿ ಹೋಗಿದೆ
ಈಗ! ಒಣಗಿದೆ ಗಂಟಲ ಪಸೆ
ಬಾವಿ , ಕೆರೆ ,ಹೊಂಡಗಳೆಲ್ಲ
ಬತ್ತಿ ನಿಂತಿದೆ
ಮಳೆಗಾಗಿ ಮುಖವೆತ್ತಿ
ಬಿರುಕು ತುಟಿಗಳೊಡ್ಡಿ
ಮತ್ತೆ ಬರಬಹುದು ಮಳೆ
ಮತ್ತೆ ತಂಪಾಗಲೂ ಬಹುದು
ಆದರೆ..
ಮಳೆಯ ಮರುದಿನ
ಆವಿಯಾಗುವುದಕ್ಕೂ ನೀರಿಲ್ಲ
ಉಳಿಸಿಕೊಳ್ಳೋಣ ಮಳೆಯ ನೀರು
ಇಂಗಿಸುತ್ತ ಭುವಿಯೆದೆಯೊಳಗೆ
ಹೆಚ್ಚಿಸಿ ಅಂತರ್ಜಲವ
ಕಮ್ಮಿಯಾಗಿಸಿಕೊಳ್ಳುವ ದಾಹವ
ಹನಿ ಹನಿಯೂ ಅಮೂಲ್ಯ
ಬದುಕು ಅನಿವಾರ್ಯ
ಸಂಗ್ರಹಿಸ ಬನ್ನಿ ಮಳೆ ನೀರ
ಜೀವ ಸಂಕುಲದ ಜೀವದಾಧಾರ
ಗಾಯತ್ರೀ ರಾಘವೇಂದ್ರ ,ಶಿರಸಿ