ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಉಳಿಸ ಬನ್ನಿ

ಧೋ ಸುರಿದ ಮಳೆ

ಮಣ್ಣ ತಂಪಾಗಿಸಿ ನಡೆಯಿತು

ಬಿದ್ದ ನೀರು ಹರಿದು ಸರಿದು

ಕಡಲ ಸೇರಿತು

 

ಮತ್ತೆ ಧಗೆ , ಉರಿ

ಜಳಕದಂತೆ ಹೊಯ್ದ ನೀರು

ಆರಿ ಹೋಗಿದೆ

ಈಗ! ಒಣಗಿದೆ ಗಂಟಲ ಪಸೆ

 

ಬಾವಿ , ಕೆರೆ ,ಹೊಂಡಗಳೆಲ್ಲ

ಬತ್ತಿ ನಿಂತಿದೆ

ಮಳೆಗಾಗಿ ಮುಖವೆತ್ತಿ

ಬಿರುಕು ತುಟಿಗಳೊಡ್ಡಿ

 

ಮತ್ತೆ ಬರಬಹುದು ಮಳೆ

ಮತ್ತೆ ತಂಪಾಗಲೂ ಬಹುದು

ಆದರೆ..

ಮಳೆಯ ಮರುದಿನ

ಆವಿಯಾಗುವುದಕ್ಕೂ ನೀರಿಲ್ಲ

 

ಉಳಿಸಿಕೊಳ್ಳೋಣ ಮಳೆಯ ನೀರು

ಇಂಗಿಸುತ್ತ ಭುವಿಯೆದೆಯೊಳಗೆ

ಹೆಚ್ಚಿಸಿ ಅಂತರ್ಜಲವ

ಕಮ್ಮಿಯಾಗಿಸಿಕೊಳ್ಳುವ ದಾಹವ

 

ಹನಿ ಹನಿಯೂ ಅಮೂಲ್ಯ

ಬದುಕು ಅನಿವಾರ್ಯ

ಸಂಗ್ರಹಿಸ ಬನ್ನಿ ಮಳೆ ನೀರ

ಜೀವ ಸಂಕುಲದ ಜೀವದಾಧಾರ

 

ಗಾಯತ್ರೀ ರಾಘವೇಂದ್ರ ,ಶಿರಸಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*