ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹನಿಬಿಂದು

ಅಗೆದಗೆದು ಬಗೆದು
ಎದೆನೆಲವ ಸೀಳಿದರೂ
ಅಂತರಂಗವು ಖಾಲಿ
ಹನಿ ಕಂಬನಿಯೂ ಉಳಿದಿಲ್ಲ

ಅಗ್ನಿಯುಂಡೆಯಂತೆ ಸುಡುತಿದೆ
ಧಗಧಗಿಸಿ ಸಂಕುಲವ
ಆರಿಸುವುದಾದರೂ ಹೇಗೆ
ಹನಿ ಹನಿಯೂ ತುಟ್ಟಿ

ಹೆಜ್ಜೆಯಿಡುವುದಾದರೂ ಎಲ್ಲಿ
ಜಗವೆಲ್ಲ ಕಾದ ಹೆಂಚು
ಗಿಡ ಮರವೆಲ್ಲ ಗೋಡೆಯ ಮೇಲಿನ
ಇತಿಹಾಸ ಚಿತ್ರ

ಚಿನ್ನ ವಜ್ರಗಳು ಯಾರಿಗೆ ಬೇಕಾಗಿದೆ
ಚೋರ ಕಂಟಕ ವಿರುವುದು
ಭದ್ರಪಡಿಸಿದ
ಆಪತ್ ಜಲಕ್ಕೆ

ಇಲ್ಲಿ ಮಾರಲಾಗುತ್ತದೆ ಜೀವ ಜಲವ
ಬಿಂದುವಿನ ಲೆಕ್ಕದಲ್ಲಿ
ಬರಹ ಫಲಕದ ಮುಂದೆ
ಕೋಟಿ ರಿಕ್ತ ಹಸ್ತ

ಜಲವಿಲ್ಲದ ಭೂಮಿ
ಉಸಿರಿಲ್ಲದ ಜೀವದಂತೆ
ಅರಿತು ಎಚ್ಚೆತ್ತರೆ
ಉಳಿದೀತು ವಂಶವೃಕ್ಷ

ಗಾಯತ್ರೀ ರಾಘವೇಂದ್ರ, ಶಿರಸಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*