ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಎಲ್ಲರಿಗೂ ಬೇಕು ದುಬಾರಿ ತಂತ್ರಜ್ಞಾನ!!

ಇಸವಿ ೨೦೧೯ಕ್ಕೆ ಚನ್ನೈ ಬಯಸುವ ನೀರು ಎಷ್ಟು ಗೊತ್ತಾ!! ದಿನಕ್ಕೆ ೧೫೬೦ ಮಿಲಿಯನ್ ಲೀಟರ್‌ಗಳು!!!! ಆಗ ಸಿಗುವ ನೀರು ದಿನಕ್ಕೆ ಕೇವಲ ೮೪೦ ಮಿಲಿಯನ್ ಲೀಟರ್‌ಗಳು ಮಾತ್ರಾ. ಇನ್ನುಳಿದ ೭೨೦ ಮಿಲಿಯನ್ ಲೀಟರ್‌ಗಳಷ್ಟು ನೀರನ್ನು ತರುವುದು ಎಲ್ಲಿಂದ? (more…)

ಪರಿಸರ ಕಾಳಜಿಯ ವಿಶಿಷ್ಟ ಸ್ವಾಮೀಜಿ

ಶ್ರಾವಣ ಬಂತೆಂದರೆ ನಾಡಿನ ಎಲ್ಲ ದೇವಸ್ಥಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಪೂಜೆ, ಧಾರ್ಮಿಕ ಆಚರಣೆಗಳು ಸರ್ವೆಸಾಮಾನ್ಯ. ಇನ್ನು ಮಠಗಳಲ್ಲಿ ಹೇಳುವುದೇ ಬೇಡ ಗದ್ದುಗೆಗಳಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. (more…)

ಬತ್ತಿದ ಕೊಳವೆ ಬಾವಿಗೆ ಮರುಜೀವ ನೀಡಿದ ಕೆರೆ

ಪ್ರತಿ ಗ್ರಾಮದಲ್ಲೂ ಒಂದೋ, ಎರಡೊ ಕೆರೆಗಳು ಇವೆ. ರಾಜರ ಕಾಲದಲ್ಲಿ ರಚಿಸಲ್ಪಟ್ಟ ಕೆಲವೊಂದು ಕೆರೆಗಳು ಇದೀಗ ಒತ್ತವರಿಯಾಗಿ ಅವುಗಳ ಕುರುಹುಗಳೆ ಕಾಣಸಿಗುತ್ತಿಲ್ಲ. ಒಂದು ಊರಿನಲ್ಲೊಂದು ಕೆರೆ ಇದ್ದರೆ ಆ ಊರು ಸಮೃದ್ಧಿಯಾಗಿ ಇದೆ ಎಂದೇ ಅರ್ಥ. (more…)

ನದಿ ನೀರಿಗಿಂತ ಮೂರು ಸಾವಿರ ಪಾಲು ಅಂತರ್ಜಲ ನೆಲದಲ್ಲಿ ಶೇಖರಿತ!

ಭಾರೀ ನೀರಾವರಿ ಯೋಜನೆಗಳ ಕಡೆಯೇ ನಮ್ಮ ಚಿತ್ತ ಹರಿಯುವುದೇಕೆ? ಕಾರಣ, ಆಧುನಿಕ ಜಗತ್ತಿನಲ್ಲಿ ಎಲ್ಲವೂ ‘ಬೃಹತ್’ ಆಕಾರದ್ದಾಗಿದ್ದರೆ ಗಮನ ಸೆಳೆಯುತ್ತದೆ.. ಪುಟ್ಟದಿದ್ದಷ್ಟೂ ಅದು ಉದಾಸೀನಕ್ಕೆ ಮೂಲವ್ಯಾಧಿಯಾಗುತ್ತದೆ! (more…)

ಸದ್ಯ ೫ ಲಕ್ಷ ಕೊಳವೆ ಬಾವಿ: ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟು! – ನೆಲದ ನೀರೇ ಕೃಷಿಗೆ ಮೂಲಾಧಾರ!

ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳು ಪ್ರತಿ ವರ್ಷ ಒದಗಿಸಬಹುದಾದ ಸರಾಸರಿ ಮೇಲ್ಮೈ ನೀರಿನ ಪ್ರಮಾಣ ೯೭,೩೫೨ ಮಿಲಿಯನ್ ಘನ ಮೀಟರ್ (ಎಂಸಿಎಂ)! ಇಷ್ಟು ಪ್ರಮಾಣದ ನೀರು ಹರಿದು ಸಾಗರವನ್ನು ಸೇರುತ್ತಿದ್ದರೂ, ನೀರಾವರಿ ಕೃಷಿಗಾಗಿ ಉಪಯೋಗಿಸಬಹುದಾದ ನೀರಿನ ಪ್ರಮಾಣ ಸುಮಾರು ೪೮ ಮಿಲಿಯನ್ ಘನ ಮೀಟರ್ ಮಾತ್ರ ಎಂದು ನೀರಾವರಿ ತಜ್ಞರು ದಾಖಲಿಸುತ್ತಾರೆ. (more…)

ಕೆರೆನೋಟ-82 : ಕೆರೆ ಒತ್ತುವರಿ: ಅಧಿಕಾರ ಇಲ್ಲದಾಗ ಏನೆಂದಿದ್ದರು?-2

ಬ್ರಿಟಿಷ್ ವೈಸರಾಯ್ ಲಾರ್ಡ್ ಕಾರ್ನ್‍ವಾಲಿಸ್ ರವರು ಬೆಂಗಳೂರನ್ನು ‘ಸಾವಿರ ಕೆರೆಗಳ ನಾಡು’ಎಂದು ಹೇಳಿರುವುದು ಬೆಂಗಳೂರಿನ ಗತವೈಭವದ ಚಿತ್ರಣ ಮುಂದಿನ ಪೀಳಿಗೆಗೆ ಚರಿತ್ರೆ ಮಾತ್ರ. ಎಂಬುದನ್ನು ನೆನಪಿಸಿಕೊಂಡಿದ್ದ ಕುಮಾರಸ್ವಾಮಿ ಅವರು, ಕೆ.ಟಿ.ಸಿ.ಪಿ. ಕಾಯ್ದೆಯನುಸಾರ ಬಡಾವಣೆ ನಿರ್ಮಿಸುವುದನ್ನು ನಿಯಂತ್ರಿಸಲು ಸಾಕಷ್ಟು ಅಧಿಕಾರವಿದ್ದರೂ ಇಲಾಖೆಯು ಮೂಕ ಪ್ರೇಕ್ಷಕರಾಗಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಲು ಮತ್ತು ನಗದಾದ್ಯಂತ ಸರ್ವವ್ಯಾಪಿ ಅಕ್ರಮಗಳು ತಲೆ ಎತ್ತಲು ಸಹಕಾರಿಯಾಗಿವೆ ಎಂದು ಹೇಳಿದ್ದರು. (more…)

ಕೆರೆನೋಟ-81: ಕೆರೆ ಒತ್ತುವರಿ: ಅಧಿಕಾರ ಇಲ್ಲದಾಗ ಏನೆಂದಿದ್ದರು?-1

“ನುಂಗಣ್ಣರ ಪಾಲಾದ ಕೆರೆ: ತನಿಖೆಗೆ ಕರೆ”— ಇದು ಕುಮಾರಸ್ವಾಮಿ ಅವರು ಅಂದು ವಿಧಾನಸಭೆಯಲ್ಲಿ ಕೆರೆಗಳ ಒತ್ತುವರಿ ಸಂದರ್ಭದಲ್ಲಿ ತಮ್ಮ ಮಾತಿನ ಸಂಕ್ಷಿಪ್ತ ಸಂಗ್ರಹಕ್ಕೆ ನೀಡಿದ್ದ ಶೀರ್ಷಿಕೆ.  “ಬೆಂಗಳೂರು ನಗರದಲ್ಲಿ ಕೆರೆಗಳ ಒತ್ತುವರಿ ಮತ್ತು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿರುವ ನೂರಾರು ಕೋಟಿ ರೂಪಾಯಿಗಳ ಸತ್ಯ ಹೊರಬರಬೇಕಾದರೆ ಮತ್ತು ರಾಜ್ಯ ಸರ್ಕಾರಕ್ಕೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಮನಸ್ಸು ಇದ್ದರೆ ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸುವುದು ಇಂದಿನ ಅಗತ್ಯವಾಗಿದೆ”… (more…)

ಗೌರಿಬಿದನೂರು ಪಟ್ಟಣದಲ್ಲೊಂದು ಛಾವಣಿ ನೀರು ಸಂಗ್ರಹ

ಗೌರಿಬಿದನೂರು ಪಟ್ಟಣವು ಕಳೆದ ಐದಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ತೀವ್ರವಾದ ಬವಣೆ ಪಡುತ್ತಲೇ ಇದೆ. ಜೊತೆಗೆ ಗೃಹ ಬಳಕೆಯ ಉಳಿದ ನೀರಿಗೂ ಕೊರತೆ ಮುಂದುವರಿಯುತ್ತಲೇ ಇದೆ. ಹಣ ತೆತ್ತು ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಳ್ಳುವ ಅನಿವಾರ‍್ಯತೆ ಬಂದಿದೆ. (more…)

ಮೂರು ವರ್ಷಗಳ ಬಳಿಕ ತುಂಬಿತು ಕೆಂಗೆಟ್ಟೆ ಕೆರೆ

ಕೆರೆಯೊಂದು ಅಭಿವೃದ್ಧಿಗೊಂಡರೆ ಊರೊಂದು ಅಭಿವೃದ್ಧಿಗೊಂಡಂತೆ ಎಂಬ ಮಾತು ಅಕ್ಷರಶಃ ಸತ್ಯ. ನಾವು ಇಂದು ಮಾಡಬೇಕಾದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿಯು ಒಂದು. ಕೆರೆಯ ಹೂಳೆತ್ತುವ ಮೂಲಕ ಮಳೆಗಾಲದ ನೀರನ್ನು ಇಂಗಿಸಿ ಆ ಮೂಲಕ ಆ ಊರಿನ ನೀರ ಸಮಸ್ಯೆಯನ್ನು ದೂರವಾಗಿಸಿದ ಉದಾಹರಣೆಯೊಂದು ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿದೆ. (more…)

ಖಾಸಗೀ ವಲಯದ ಹಣ… ಕೆರೆ ಸಂರಕ್ಷಣೆ ಪಣ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿ ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಕೆಲ ಉತ್ಪಾದಕ ಮತ್ತು ಅನುತ್ಪಾದಕ ಖಾಸಗೀ ಕಂಪನಿಗಳೇ ಕೆರೆ ಮಾಲಿನ್ಯಕ್ಕೆ ಕಾರಣ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಖಾಸಗೀ ವಲಯದ ಕಂಪನಿಗಳೆಲ್ಲಾ ಒಂದಾಗಿ ಕೆರೆ ಸಂರಕ್ಷಣೆಗೆ ಪಣ ತೊಟ್ಟಿವೆ. (more…)