ಜೀವನದಿ ಕಾವೇರಿ

ಕನ್ನಡ ನಾಡಿನ ಜೀವ ನದಿ ಕಾವೇರಿ. ದಕ್ಷಿಣದ ಗಂಗೆ ಎಂದೇ ಹೆಸರಾದ ಇದು, ಹಲವು ಕೋಟಿ ಜನ-ಜೀವಿಗಳ ಜೀವನಾಧಾರ. ಕೊಡಗಿನ ಜನರ ಆರಾಧ್ಯ ದೈವ. ಈ ನದಿಯ ಮೂಲ ಸೆಲೆಯಿರುವುದು ಹಸಿರು ಹೊದ್ದ ಬ್ರಹ್ಮಗಿರಿಯ ತಲಕಾವೇರಿಯಲ್ಲಿ. ಅರಬ್ಬಿ ಸಮುದ್ರದ ಅನತಿ ದೂರದಲ್ಲಿಯೇ ಹುಟ್ಟಿದರೂ, ಅದಕ್ಕೆ ಬೆನ್ನಿಕ್ಕಿ, ಕೋಟ್ಯಂತರ ಜನರ ದಾಹ ತಣಿಸಿ, ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಿ, ನೂರಾರು ಮೈಲು ದೂರ ಕ್ರಮಿಸಿ, ಬಂಗಾಳ ಕೊಲ್ಲಿಯ ಒಡಲಲ್ಲಿ ಲೀನವಾಗುತ್ತದೆ ಕಾವೇರಿ. ಈ ಜೀವ ನದಿಯ ನೀರುಣ್ಣಲು ನೆರೆಯ ರಾಜ್ಯಗಳೊಂದಿಗೆ ನಿರಂತರ ಸೆಣಸುತ್ತಿದ್ದೇವೆ.
ಆದರೆ ಕಾವೇರಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ? ಅದರ ತಟದಲ್ಲಿರುವ ಸಂಸ್ಕೃತಿಯ ಬಗ್ಗೆ ಎಷ್ಟು ತಿಳಿದಿದ್ದೇವೆ? ಕಾವೇರಿ ಜನಿಸುವಲ್ಲಿಂದ ಪ್ರಾರಂಭಿಸಿ ದೂರದ ಬಂಗಾಳ ಕೊಲ್ಲಿಯವರೆಗೂ ಚಿತ್ರಗಳನ್ನು ತೆಗೆದು ಬರೆದಿಟ್ಟ ಕ್ಲೇಯ್ರ್ ಹಾಗೂ ಆರಿಯೋಲ್ ರೊಂದಿಗೆ ಒಂದು ಪುಟ್ಟ ಪ್ರಯಾಣ ಮಾಡೋಣ. ಬರ್ತೀರ?

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ಚಿತ್ರಗಳು ಅದ್ಭುತವಾಗಿ ಮನಸೆಳೆಯುತ್ತವೆ.ಬಳಸಿದ ತಂತ್ರಜ್ಞಾನವೂ ಚೆನ್ನಾಗಿದೆ.
*ಅಶೋಕ್

ತುಂಬಾ ಚೆನ್ನಾಗಿ ಬಂದಿದೆ. ನನ್ನ ಸಹೋದ್ಯೋಗಿಗಳೂ ಮೆಚ್ಚಿಕೊಂಡರು..

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
4 + 4 =
Solve this simple math problem and enter the result. E.g. for 1+3, enter 4.